alex Certify ಕಾಡಿನಲ್ಲಿ ಶವವಾಗಿ ಪತ್ತೆಯಾದ ಜೋಡಿಯ ಖಾಸಗಿ ಅಂಗಗಳು ಛಿದ್ರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಾಡಿನಲ್ಲಿ ಶವವಾಗಿ ಪತ್ತೆಯಾದ ಜೋಡಿಯ ಖಾಸಗಿ ಅಂಗಗಳು ಛಿದ್ರ

ರಾಜಸ್ಥಾನದ ಉದಯಪುರದ ಸಮೀಪ ಕಾಡಿನಲ್ಲಿ ಛಿದ್ರಗೊಂಡ ಖಾಸಗಿ ಅಂಗಗಳೊಂದಿಗೆ ಪುರುಷ ಮತ್ತು ಮಹಿಳೆ ಶವಗಳು ಪತ್ತೆಯಾಗಿವೆ.

ಉದಯಪುರದ ಗೋಗುಡ ಪೊಲೀಸ್ ಠಾಣೆ ವ್ಯಾಪ್ತಿಯ ಮಹಾದೇವ ಜಂಗಲ್‌ ನಲ್ಲಿ ಶವಗಳು ಪತ್ತೆಯಾಗಿವೆ. ಕೊಲೆ ಹಾಗೂ ಪ್ರೇಮ ಪ್ರಕರಣದ ಸಂಬಂಧ ಈ ಕೃತ್ಯ ನಡೆದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ಫೋರೆನ್ಸಿಕ್ ತಜ್ಞರನ್ನೂ ಸ್ಥಳಕ್ಕೆ ಕರೆಸಿ ಪರಿಶೀಲನೆ ನಡೆಸಲಾಗಿದೆ. ಉದಯಪುರ ಜಿಲ್ಲೆಯ ಗೊಗುಡಾ ಪಿಎಸ್ ವ್ಯಾಪ್ತಿಯ ಅಂಬ್ರೇಶ್ವರ ಮಹಾದೇವ್ ಜಂಗಲ್‌ ನಲ್ಲಿ ಪುರುಷ ಮತ್ತು ಮಹಿಳೆಯ ಶವಗಳು ಪತ್ತೆಯಾಗಿವೆ. ಅವರ ಖಾಸಗಿ ಅಂಗಗಳನ್ನು ಛಿದ್ರಗೊಳಿಸಲಾಗಿದೆ. ಇದು ಕೊಲೆ ಮತ್ತು ಪ್ರೇಮ ಪ್ರಕರಣ ಎಂದು ತೋರುತ್ತದೆ. ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಉದಯಪುರದ ಪೊಲೀಸ್ ವರಿಷ್ಠಾಧಿಕಾರಿ ವಿಕಾಸ್ ಶರ್ಮಾ ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...