ನ್ಯೂಯಾರ್ಕ್: ಟಿ-20 ವಿಶ್ವಕಪ್ ಸೆಮಿಫೈನಲ್ನಲ್ಲಿ ಇಂಗ್ಲೆಂಡ್ ವಿರುದ್ಧ ಭಾರತ ಸೋಲಿನ ನಂತರ ನಿರಾಶೆಗೊಂಡಿದ್ದೀರಾ? ಹಾಗಿದ್ದಲ್ಲಿ, ಈ ವೀಡಿಯೊ ನಿಮ್ಮ ಉತ್ಸಾಹವನ್ನು ಹೆಚ್ಚಿಸಬಹುದು. ಇದನ್ನು ಆನಂದ್ ಮಹೀಂದ್ರಾ ಟ್ವಿಟರ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ನ್ಯೂಯಾರ್ಕ್ನ ಬೀದಿಗಳಲ್ಲಿ ಕ್ಯಾಬ್ ಚಾಲಕನೊಬ್ಬನನ್ನು ಭೇಟಿಯಾಗಿದ್ದ ಆನಂದ್ ಮಹೀಂದ್ರಾ ಅವರ ಸ್ನೇಹಿತರೊಬ್ಬರು, ಆ ಚಾಲಕ ಭಾರತದ ಬಗ್ಗೆ ಮಾತನಾಡಿರುವ ವಿಡಿಯೋ ಸೆರೆ ಹಿಡಿದಿರುವ ಕುರಿತು ಆನಂದ್ ಮಹೀಂದ್ರಾ ಹೇಳಿಕೊಂಡಿದ್ದಾರೆ.
ಪ್ರಪಂಚದಾದ್ಯಂತ ಇರುವ ಭಾರತೀಯರ ಬಗ್ಗೆ ಈ ಚಾಲಕ ಅದ್ಭುತವಾದ ವಿಷಯಗಳನ್ನು ಹೇಳಿರುವುದು ವಿಡಿಯೋದಲ್ಲಿ ಕಾಣಬಹುದು. ಭಾರತದ ಕುರಿತು ಇಡಿ ವಿಶ್ವಕ್ಕೆ ಈತ ನೀಡಲು ಹೊರಟಿರುವ ಸಂದೇಶದ ಬಗ್ಗೆ ಕೇಳಿ ಖುಷಿ ಪಡಬಹುದು.
“ಹಲೋ ಸ್ನೇಹಿತರೇ, ಈಗ ಜಗತ್ತನ್ನು ನಡೆಸುತ್ತಿರುವ ಎಲ್ಲಾ ಭಾರತೀಯರಿಗೆ ನಾನು ಈ ಸಂದೇಶವನ್ನು ನೀಡಲು ಬಯಸುತ್ತೇನೆ. ನಿಮಗೆಲ್ಲಾ ನಮಸ್ಕಾರ. ಭಾರತ ಅದ್ಭುತವಾಗಿರುವ ದೇಶ“ ಎಂದಿದ್ದಾನೆ. ಈ ವಿಡಿಯೋ ನೋಡಿದ ಲಕ್ಷಾಂತರ ಮಂದಿ ಮೆಚ್ಚುಗೆ ವ್ಯಕ್ತಪಡಿಸಿದ್ದು, ಭಾರತದ ಬಗ್ಗೆ ಹೆಮ್ಮೆಯಿಂದ ಬೀಗಿದ್ದಾರೆ.