alex Certify ಬಿರಿಯಾನಿ ನೀಡಲು ವಿಳಂಬವಾಯಿತೆಂದು ಹೋಟೆಲ್​ ಸರ್ವರ್​ ಮೇಲೆ ಭಾರಿ ಹಲ್ಲೆ: ಮೂವರ ಅರೆಸ್ಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಿರಿಯಾನಿ ನೀಡಲು ವಿಳಂಬವಾಯಿತೆಂದು ಹೋಟೆಲ್​ ಸರ್ವರ್​ ಮೇಲೆ ಭಾರಿ ಹಲ್ಲೆ: ಮೂವರ ಅರೆಸ್ಟ್

ನೋಯ್ಡಾ (ಉತ್ತರ ಪ್ರದೇಶ): ಕೆಲವರಿಗೆ ಕೋಪ ಮೂಗಿನ ಮೇಲೆಯೇ ಇರುತ್ತದೆ. ಯಾವಾಗ ಇದು ನೆತ್ತಿಗೇರುತ್ತದೆಯೊ ತಿಳಿಯುವುದಿಲ್ಲ. ಇನ್ನು ಕೆಲವರು ಅಹಂನಿಂದ ಬೀಗುತ್ತಿರುತ್ತಾರೆ, ತನ್ನನ್ನು ಬಿಟ್ಟರೆ ಎಲ್ಲರೂ ಕೇವಲ ಎನ್ನುವುದು ಇವರ ಭಾವನೆ. ಇಂಥವರು ತಮಗೆ ಸ್ವಲ್ಪ ತೊಂದರೆಯಾದರೂ ಸುಮ್ಮನೆ ಇರುವವರಲ್ಲ. ಹಿಂದೆ ಮುಂದೆ ನೋಡದೆ ಥಳಿಸುವುದೊಂದೇ ಮಾಡುತ್ತಾರೆ. ಅಂಥದ್ದೇ ಒಂದು ಅಮಾನವೀಯ ವಿಡಿಯೋ ಒಂದು ಇದೀಗ ವೈರಲ್​ ಆಗಿದೆ.

ಗ್ರೇಟರ್​ ನೋಯ್ಡಾದಲ್ಲಿ ನಡೆದ ಘಟನೆಯ ವಿಡಿಯೋ ಇದಾಗಿದೆ. ರೆಸ್ಟೊರೆಂಟ್‌ನಲ್ಲಿ ರಾತ್ರಿ ಊಟಕ್ಕೆಂದು ಹೊರಟಿದ್ದ ಮೂವರು ವ್ಯಕ್ತಿಗಳು ಬಿರಿಯಾನಿ ಆರ್ಡರ್ ಮಾಡಿದ್ದರು. ಆದರೆ ಅದನ್ನು ಕೊಡಲು ವಿಳಂಬವಾಯಿತು ಎನ್ನುವ ಕಾರಣಕ್ಕೆ ಸರ್ವರ್ ​ನನ್ನು ಥಳಿಸುತ್ತಿರುವುದು ವಿಡಿಯೋದಲ್ಲಿ ಕಾಣಬಹುದು. ಮೂವರು ವ್ಯಕ್ತಿಗಳು ನೌಕರನನ್ನು ರೆಸ್ಟೋರೆಂಟ್‌ನಿಂದ ಹೊರಗೆಳೆದು ಒದೆಯುವುದು ಮತ್ತು ಥಳಿಸುವುದು ವಿಡಿಯೋದಲ್ಲಿ ಕಾಣಿಸುತ್ತದೆ.

ಗ್ರೇಟರ್ ನೋಯ್ಡಾದ ಅನ್ಸಲ್ ಪ್ಲಾಜಾ ಮಾಲ್‌ನಲ್ಲಿರುವ ಝೌಕ್ ರೆಸ್ಟೋರೆಂಟ್‌ನಲ್ಲಿ ಈ ಘಟನೆ ನಡೆದಿದೆ. ಹೀಗೆ ಅಮಾನವೀಯವಾಗಿ ಥಳಿಸಿದವರನ್ನು ಮನೋಜ್, ರರವೇಶ್ ಮತ್ತು ಕ್ರಿಶ್ ಎಂದು ಗುರುತಿಸಲಾಗಿದ್ದು ಎಲ್ಲರನ್ನೂ ಬಂಧಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...