alex Certify BIG NEWS: ಸಿದ್ದರಾಮಯ್ಯ ವಿರುದ್ಧ ಕುರುಬ ಸಮುದಾಯದ ನಾಯಕರ ಗುಸು ಗುಸು; ಸಮುದಾಯದ ಮುಖಂಡರಿಂದಲೇ ಅವಹೇಳನ…..? ಆಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಸಿದ್ದರಾಮಯ್ಯ ವಿರುದ್ಧ ಕುರುಬ ಸಮುದಾಯದ ನಾಯಕರ ಗುಸು ಗುಸು; ಸಮುದಾಯದ ಮುಖಂಡರಿಂದಲೇ ಅವಹೇಳನ…..? ಆಡಿಯೋ ವೈರಲ್

ಬೆಂಗಳೂರು: ಕುರುಬ ಸಮುದಾಯದ ಮುಖಂಡರೇ ಮಾಜಿ ಸಿಎಂ, ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಅವಹೇಳನಕಾರಿಯಾಗಿ ಗುಸು ಗುಸು ಮಾತನಾಡಿರುವ ಆಡಿಯೋ-ವಿಡಿಯೋ ವೈರಲ್ ಆಗಿದೆ.

ಕುರುಬ ಸಮುದಾಯದ ಮುಖಂಡರು ನಡೆಸಿದ್ದ ಸುದ್ದಿಗೋಷ್ಠಿ ವೇಳೆ ಮುಕುಡಪ್ಪ ಹಾಗೂ ಎಸ್. ಪುಟ್ಟಸ್ವಾಮಿ ನಡುವಿನ ಮಾತುಕತೆ ಆಡಿಯೋ ಬಹಿರಂಗವಾಗಿದೆ. ಮುಖಂಡರಿಬ್ಬರೂ ಸಿದ್ದರಾಮಯ್ಯ ವಿರುದ್ಧ ಕೆಲ ಆಕ್ಷೇಪಾರ್ಹ ಮಾತುಗಳನ್ನಾಡಿದ್ದಾರೆ ಎನ್ನಲಾಗಿದೆ.

ಮುರುಘಾ ಸ್ವಾಮೀಜಿ ವಿಷಯ ಹೊರಬಂದಿದೆ. ನಮ್ಮ ಟಗರು ಏನ್ ಕಡಿಮೇನಾ ? 20 ಕುರಿಗಳ ಮೇಲೆ ಒಂದು ಟಗರು ಎಗರುತ್ತೆ. ಕೆಲವರ ವಿಷಯ ಹೊರಬರುತ್ತೆ…… ಇಂಥಾ ವಿಚಾರದಲ್ಲಿ ಸಿದ್ದರಾಮಯ್ಯ ತುಂಬಾ ಹುಷಾರು….. ಸಿದ್ದರಾಮಯ್ಯ ನೋಡಿಕೊಂಡು ಮನೆ ಸೇರಿಬಿಡ್ತಾರೆ….. ಎಂದು ಸಿದ್ದರಾಮಯ್ಯ ಅವರ ಅಹಿಂದ ಚಟುವಟಿಕೆ ವೇಳೆ ಆಪ್ತರಾಗಿದ್ದ ಮುಕುಡಪ್ಪ ಹಾಗೂ ಎಸ್. ಪುಟ್ಟಸ್ವಾಮಿ ಮಾತನಾಡಿಕೊಂಡಿದ್ದಾರೆ ಎನ್ನಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...