alex Certify BIG NEWS: ಚಂದ್ರಶೇಖರ್ ಸಾವಿನ ಪ್ರಕರಣ; ಎರಡು ಆಯಾಮಗಳಲ್ಲಿ ತನಿಖೆಗೆ ಸೂಚಿಸಿದ ಸಿಎಂ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಚಂದ್ರಶೇಖರ್ ಸಾವಿನ ಪ್ರಕರಣ; ಎರಡು ಆಯಾಮಗಳಲ್ಲಿ ತನಿಖೆಗೆ ಸೂಚಿಸಿದ ಸಿಎಂ

ದಾವಣಗೆರೆ: ಹೊನ್ನಾಳಿ ಶಾಸಕ ರೇಣುಕಾಚಾರ್ಯ ಸಹೋದರನ ಮಗ ಚಂದ್ರಶೇಖರ್ ಸಾವು ಹಿನ್ನೆಲೆಯಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿ ಇಂದು ರೇಣುಕಾಚಾರ್ಯ ನಿವಾಸಕ್ಕೆ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದರು.

ಈ ವೇಳೆ ಮಾತನಾಡಿದ ಸಿಎಂ ಬೊಮ್ಮಾಯಿ, ಚಂದ್ರಶೇಖರ್ ಸಾವು ಆಘಾತ ತಂದಿದೆ. ಈ ರೀತಿ ಸಾವು ಬರುತ್ತೆ ಎಂದು ಯಾರೂ ಊಹಿಸಿರಲಿಲ್ಲ. ರೇಣುಕಾಚಾರ್ಯ ನನ್ನ ಸಹೋದರನಿದ್ದಂತೆ. ರೇಣುಕಾಚಾರ್ಯ ಅವರ ಎಲ್ಲಾ ಕೆಲಸಗಳನ್ನು ಚಂದ್ರು ನೋಡಿಕೊಳ್ಳುತ್ತಿದ್ದ. ಏಕಾಏಕಿ ಚಂದ್ರು ಸಾವನ್ನಪ್ಪಿರುವುದು ಆಘಾತತಂದಿದೆ ಎಂದರು.

ಚಂದ್ರು ಸಾವಿನ ಬಗ್ಗೆ ಸಂಪೂರ್ಣ ತನಿಖೆ ನಡೆಸುವಂತೆ ಪೊಲೀಸರಿಗೆ ಸೂಚಿಸಿದ್ದೇನೆ. ಘಟನೆ ಮರುಸೃಷ್ಟಿ ಮಾಡಿ ತನಿಖೆ ನಡೆಸಲಾಗುವುದು. ಮರಣೋತ್ತರ ವರದಿ ಹಾಗೂ ಎಫ್ ಎಸ್ ಎಲ್ ವರದಿ ಬರಬೇಕಿದೆ. ಇಲ್ಲಿ ಎರಡು ಸಾಧ್ಯಾಸಾಧ್ಯತೆಗಳಿವೆ. ಚಂದ್ರು ಜನಪ್ರಿಯತೆ ಗಮನಿಸಿದರೆ ಕೊಲೆ ಇರಬಹುದು ಎನಿಸುತ್ತದೆ. ಘಟನೆ ನಡೆದ ಸ್ಥಳ ಪರಿಶೀಲಿಸಿದಾಗ ಅಪಘಾತವಾಗಿರಲೂಬಹುದು ಎನಿಸುತ್ತದೆ. ಹಾಗಾಗಿ ಎರಡೂ ಆಯಾಮಗಳಲ್ಲಿ ತನಿಖೆ ನಡೆಸುವಂತೆ ಸೂಚಿಸಿದ್ದೇನೆ. ಸಂಪೂರ್ಣ ತನಿಖೆ ನಡೆಸದೇ ಯಾವುದೇ ನಿರ್ಧಾರಕ್ಕೆ ಬಾರದಂತೆ ಹೇಳಿದ್ದೇನೆ. ಈ ನಿಟ್ಟಿನಲ್ಲಿ ಎಲ್ಲಾ ಆಯಾಮಗಳಲ್ಲೂ ತನಿಖೆಯಾಗಲಿದೆ ಎಂದು ಹೇಳಿದರು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...