alex Certify ಮಕ್ಕಳು ಕಣ್ಣಾಮುಚ್ಚಾಲೆ ಆಡುತ್ತಿರುವಾಗಲೇ ಜವರಾಯನ ಆಟ: ಲಿಫ್ಟ್ ಬಡಿದು ಬಾಲಕಿ ಸಾವು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಕ್ಕಳು ಕಣ್ಣಾಮುಚ್ಚಾಲೆ ಆಡುತ್ತಿರುವಾಗಲೇ ಜವರಾಯನ ಆಟ: ಲಿಫ್ಟ್ ಬಡಿದು ಬಾಲಕಿ ಸಾವು

ವಿಧಿ ಎಷ್ಟು ಕೂರ ಅನ್ನೊದಕ್ಕೆ ಮುಂಬೈನಲ್ಲಿ ನಡೆದ ಘಟನೆ ಸಾಕ್ಷಿಯಾಗಿದೆ. ಆಕೆ 16 ವರ್ಷದ ಬಾಲಕಿ ತನ್ನ ಸಹೋದರರ ಜೊತೆ ಸೇರಿ ಕಣ್ಣು ಮುಚ್ಚಾಲೆ ಆಡುತ್ತಿದ್ದಳು. ಆಗಲೇ ಜವರಾಯ ಈಕೆಯ ಮೇಲೆ ಕಣ್ಣು ಹಾಕಿದ್ದ.

ಬಾಲಕಿ ತನ್ನ ಸಹೋದರರು ಹಾಗೂ ಗೆಳೆಯರೊಂದಿಗೆ ಕಣ್ಣಾಮುಚ್ಚಾಲೆ ಆಡುತ್ತಿದ್ದ ಸಂದರ್ಭ ಈ ದುರ್ಘಟನೆ ನಡೆದಿದೆ. 7 ಅಂತಸ್ತಿನ ಕಟ್ಟಡದಲ್ಲಿ ಬಾಲಕಿ 5 ನೇ ಮಹಡಿಯಿಂದ ಲಿಫ್ಟ್ ಬಾಗಿಲಿನಲ್ಲಿದ್ದ ಸಣ್ಣ ಕಿಟಕಿಯೊಳಗಡೆ ತನ್ನ ತಲೆಯನ್ನು ಹಾಕಿದ್ದಾಳೆ, ಲಿಫ್ಟ್ 7 ನೇ ಮಹಡಿಯಿಂದ ಕೆಳಕ್ಕೆ ಬಂದಾಗ ಆಕೆಯ ತಲೆಗೆ ಬಡಿದಿದೆ.

ಬಾಲಕಿ ತಲೆಗೆ ಗಂಭೀರವಾಗಿ ಪೆಟ್ಟು ಬಿದ್ದಿದೆ ಅನ್ನೋದು ಗೊತ್ತಾದ ತಕ್ಷಣ ಸ್ಥಳೀಯ ಆಸ್ಪತ್ರೆ ಗೋವಂಡಿಯ ಶತಾಬ್ದಿಗೆ ಕರೆದುಕೊಂಡು ಹೋಗಲಾಗಿದೆ. ಆದರೆ ಪೆಟ್ಟು ಗಂಭೀರ ರೂಪದ್ದಾಗಿದ್ದರಿಂದ ಬಾಲಕಿ ಸ್ಥಳದಲ್ಲೇ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಈ ಘಟನೆ ಮಹಾರಾಷ್ಟ್ರದ ಮುಂಖರ್ಡ್‌ನಲ್ಲಿ ನಡೆದಿದೆ.

ವರದಿಗಳ ಪ್ರಕಾರ ಮೃತ ಬಾಲಕಿ ರೇಶಾ ಖಾರವಿ ತನ್ನ ಹೆತ್ತವರೊಂದಿಗೆ ಮುಂಖರ್ಡ್ ಸಾಥೆ ನಗರದಲ್ಲಿ ನೆಲೆಸಿದ್ದಳು. ಶುಕ್ರವಾರ ಆಕೆ ತನ್ನ ಇಬ್ಬರು ಕಿರಿಯ ಸಹೋದರರೊಂದಿಗೆ ಮುಂಖರ್ಡ್‌ನ ಲಲುಭಾಯ್ ಕಾಂಪೌಂಡ್‌ನಲ್ಲಿರುವ ತನ್ನ ಅಜ್ಜಿ ಮನೆಗೆ ತೆರಳಿದ್ದಳು. ಅದೇ ಸಮಯದಲ್ಲಿ ಈ ದುಃಖಕರ ಘಟನೆ ನಡೆದಿದ್ದು ಕುಟುಂಬಸ್ಥರು ಈಗ ಶಾಕ್ ನಲ್ಲಿದ್ದಾರೆ.

 

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...