alex Certify ಎಣ್ಣೆ ಏಟಿನ ಎಫೆಕ್ಟ್: ಮಳೆ ನೀರನ್ನೇ ಸುನಾಮಿ ಎಂದುಕೊಂಡು ಈಜಲು ಹೊರಟ ಕುಡುಕ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಎಣ್ಣೆ ಏಟಿನ ಎಫೆಕ್ಟ್: ಮಳೆ ನೀರನ್ನೇ ಸುನಾಮಿ ಎಂದುಕೊಂಡು ಈಜಲು ಹೊರಟ ಕುಡುಕ

ಒಂದೆರಡು ಪೆಗ್ ಒಳಗೆ ಹೋದರೆ ಸಾಕು, ಇಡೀ ಭೂಮಿಯೇ ಗಿರಗಿರ ಅಂತ ತಿರುಗೋಕೆ ಶುರುವಾಗುತ್ತೆ. ಅದಕ್ಕೆ ನೋಡಿ ಕುಡುಕರು ಕುಡಿದ ತಕ್ಷಣ ತೇಲಾಡ್ತಾ ಇರೋ ತರಹ ಆಡ್ತಿರ್ತಾರೆ. ಇಲ್ಲೂ ಒಬ್ಬ ಮಹಾನುಭಾವನಿಗೂ ಅದೇ ರೀತಿ ಅನುಭವ ಆದ ಹಾಗಿದೆ.

ಇಲ್ಲಿ ನೋಡಿದ್ರಾ, ಎಣ್ಣೆ ಏಟು ಓರ್ವ ವ್ಯಕ್ತಿಯಿಂದ ಏನೆಲ್ಲ ಮಾಡಿಸುತ್ತೆ ಅಂತ. ಜಲಾವೃತಗೊಂಡ ರಸ್ತೆಯಲ್ಲಿ ಕುಡುಕನೊಬ್ಬ ಈಜಲು ನೋಡುತ್ತಿದ್ದಾನೆ. ಈ ದೃಶ್ಯ ನೋಡಿದವರಿಗೆಲ್ಲ ಕಾಮಿಡಿ ಅಂತ ಅನಿಸುತ್ತೆ. ಆದರೆ ಈ ಕುಡುಕನಿಗೆ ಇದೇ ದೊಡ್ಡ ಸಾಹಸದ ಕೆಲಸ. ಸದ್ಯಕ್ಕೆ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಚೆನ್ನೈನ ಪುಲಿಯಾಂತೋಪ್ನ ಬಳಿ ಈ ದೃಶ್ಯವನ್ನು ಸೆರೆಹಿಡಿಯಲಾಗಿದೆ. ಪಾಪ ಕುಡಿದ ಅಮಲಿನಲ್ಲಿ ಇದು ಸುನಾಮಿಯೋ ಇಲ್ಲಾ, ಯಾವುದೋ ಉಕ್ಕಿ ಹರಿಯುತ್ತಿರುವ ನದಿ ಎಂದುಕೊಂಡು ಈತ ಈಜಲು ಶುರು ಮಾಡಿರುವ ಹಾಗಿದೆ. ಈ ವಿಡಿಯೋದಲ್ಲಿ ಕುಡುಕ ರೊಚ್ಚಿಗೆದ್ದು ಈಜುವ ಪರಿಯನ್ನ ನೋಡಿ ನೆಟ್ಟಿಗರು ತಮಾಷೆ ಮಾಡುತ್ತಿದ್ದಾರೆ. ಜೊತೆಗೆ ತಮಾಷೆಯಾಗಿ ಕಾಮೆಂಟ್ ಹಾಕುತ್ತಿದ್ದಾರೆ.

ಇಂತಹ ಸಾಹಸದ ಕೆಲಸ ಯಾರಿಂದಲೂ ಮಾಡಲು ಸಾಧ್ಯವೇ ಇಲ್ಲ ಅಂತ ಒಬ್ಬರು ಕಾಮೆಂಟ್ ಹಾಕಿದ್ದಾರೆ. ಇನ್ನೊಬ್ಬರು ಇಡೀ ಜಗತ್ತೇ ನಿಮ್ಮನ್ನು ತಿರುಗಿ ನೋಡೋ ಹಾಗೆ ಆಗುವ ದಿನ ಬಂದೇ ಬರುತ್ತೆ ಅಂತ ಕಾಮೆಂಟ್ ಹಾಕಿದ್ದಾರೆ. ಇನ್ನೊಬ್ಬ ಭೂಪ ನೀನು ಈಗ ಈಜಿಕೊಂಡು ಹೋಗದಿದರೆ ನದಿ ನೀರು ನಿಮ್ಮ ಮನೆಗೆಯೇ ನುಗ್ಗುತ್ತದೆ ಎಂದು ಬರೆದಿದ್ದಾರೆ.

ಕಳೆದ ವರ್ಷದ ಮಳೆಗಾಲದಲ್ಲಿ ಮುಂಬೈನಲ್ಲಿ ಕುಡುಕನೊಬ್ಬ ಹೀಗೇ ಮಳೆನೀರಿನಲ್ಲಿ ರಸ್ತೆ ಮಧ್ಯೆ ಆರಾಮಾಗಿ ಮಲಗಿದ್ದ. ಬಸ್ಸು, ಲಾರಿಗಳ ಓಡಾಟದ ಖಬರು ಇಲ್ಲದಂತೆ ತನ್ನ ಪಾಡಿಗೆ ತಲೆಯನ್ನು ಕೈಗಿಟ್ಟು ಮಲಗಿದ್ದ. ಸಾವಿರಾರು ಜನರು ಈ ವಿಡಿಯೋ ನೋಡಿ ಮೆಚ್ಚಿದ್ದರು. ಮನಬಂದಂತೆ ಪ್ರತಿಕ್ರಿಯಿಸಿದ್ದರು.

ಒಂದಂತೂ ನಿಜ, ಈ ವಿಡಿಯೋ ನೋಡಿದವರೆಲ್ಲ ಹೊಟ್ಟೆ ಹುಣ್ಣಾಗುವಂತೆ ನಕ್ಕು ಎಂಜಾಯ್ ಮಾಡಿದ್ದಂತೂ ಸುಳ್ಳಲ್ಲ.

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...