alex Certify BIG NEWS: ಗಲಾಟೆ ಪ್ರಕರಣ; ನಟ ಸೃಜನ್ ಲೋಕೇಶ್ ರನ್ನು ನಾನು ಭೇಟಿಯಾಗಿಯೂ ಇಲ್ಲ, ಗಲಾಟೆ ನಡೆದೂ ಇಲ್ಲ ಎಂದ ಅರುಣ್ ಸೋಮಣ್ಣ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಗಲಾಟೆ ಪ್ರಕರಣ; ನಟ ಸೃಜನ್ ಲೋಕೇಶ್ ರನ್ನು ನಾನು ಭೇಟಿಯಾಗಿಯೂ ಇಲ್ಲ, ಗಲಾಟೆ ನಡೆದೂ ಇಲ್ಲ ಎಂದ ಅರುಣ್ ಸೋಮಣ್ಣ

ಬೆಂಗಳೂರು: ನಟ ಸೃಜನ್ ಲೋಕೇಶ್ ಹಾಗೂ ಸಚಿವ ವಿ. ಸೋಮಣ್ಣ ಪುತ್ರ ಅರುಣ್ ಸೋಮಣ್ಣ ಟೀಂ ನಡುವೆ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಪಷ್ಟನೆ ನೀಡಿರುವ ಅರುಣ್ ಸೋಮಣ್ಣ, ನಾನು ಜೀವನದಲ್ಲಿ ನಟ ಸೃಜನ್ ಲೋಕೇಶ್ ಅವರನ್ನು ಭೇಟಿಯೇ ಆಗಿಲ್ಲ. ಅಂತಹ ಯಾವುದೇ ಗಲಾಟೆಯೂ ನಡೆದಿಲ್ಲ ಎಂದು ಹೇಳಿದ್ದಾರೆ.

ನನ್ನ ರಾಜಕೀಯ ಬೆಳವಣಿಗೆ ಸಹಿಸದೇ ಅನಗತ್ಯವಾಗಿ ಇಂತಹ ಆರೋಪ ಮಾಡಲಾಗುತ್ತಿದೆ. ಕಿಂಗ್ಸ್ ಕ್ಲಬ್ ನಲ್ಲಿ ನಾವು ಯಾರ ಜೊತೆಯೂ ಗಲಾಟೆ ಮಾಡಿಲ್ಲ. ಸೃಜನ್ ಲೋಕೇಶ್ ಅವರನ್ನು ನಾನು ಈವರೆಗೆ ನೇರವಾಗಿ ಭೇಟಿಯೂ ಆಗಿಲ್ಲ. ಸೃಜನ್ ಜೊತೆ ನನಗೆ ಯಾವುದೇ ಸಂಬಂಧವೂ ಇಲ್ಲ ಎಂದು ಹೇಳಿದ್ದಾರೆ.

ಇನ್ನು ಕಿಂಗ್ಸ್ ಕ್ಲಬ್ ನಲ್ಲಿ ಗಲಾಟೆ ಪ್ರಕರಣ ಸಂಬಂಧ ರಾಜಿ ಸಂಧಾನ ವಿಚಾರವಾಗಿ ಮಾತನಾಡಿರುವ ಅರುಣ್ ಸೋಮಣ್ಣ, ಯಾವುದೇ ರಾಜಿ ಸಂಧಾನವೂ ನಡೆದಿಲ್ಲ. ಅನಗತ್ಯವಾಗಿ ಅಪಪ್ರಚಾರ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...