alex Certify 20 ರೂ. ಮುಖಬೆಲೆಯ ಹರಿದ ನೋಟಿಗಾಗಿ ನಡೆದ ಜಗಳ; ಸಾವಿನಲ್ಲಿ ಅಂತ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

20 ರೂ. ಮುಖಬೆಲೆಯ ಹರಿದ ನೋಟಿಗಾಗಿ ನಡೆದ ಜಗಳ; ಸಾವಿನಲ್ಲಿ ಅಂತ್ಯ

20 ರೂಪಾಯಿ ಮುಖಬೆಲೆಯ ಹರಿದ ನೋಟಿಗಾಗಿ ನಡೆದ ಜಗಳ ಓರ್ವ ಮಹಿಳೆಯ ಸಾವಿನಲ್ಲಿ ಅಂತ್ಯವಾಗಿರುವ ಆಘಾತಕಾರಿ ಘಟನೆ ರಾಯಚೂರು ಜಿಲ್ಲೆಯಲ್ಲಿ ನಡೆದಿದೆ.

ಪ್ರಕರಣದ ವಿವರ: ಸಿಂಧನೂರು ತಾಲೂಕಿನ ಗೀತಾ ಕ್ಯಾಂಪಿನ ನಿವಾಸಿ 40 ವರ್ಷದ ರುಕ್ಕಮ್ಮ ಲಮಾಣಿ ಎಂಬವರು ಮಲ್ಲಮ್ಮ ಎಂಬಾಕೆಯ ಅಂಗಡಿಗೆ ತಮ್ಮ ಮಗಳನ್ನು ಕಳುಹಿಸಿ ದಿನಸಿ ತರಲು ಹೇಳಿದ್ದರು.

ಮಗಳು ದಿನಸಿ ತಂದಾಗ ಆಕೆಗೆ ಚಿಲ್ಲರೆಯಾಗಿ 20 ರೂಪಾಯಿ ಹರಿದ ನೋಟು ನೀಡಿರುವುದು ಕಂಡು ರುಕ್ಕಮ್ಮನಿಗೆ ಸಿಟ್ಟು ಬಂದಿದೆ. ಕೂಡಲೇ ನೋಟು ಹಿಡಿದು ಅಂಗಡಿಗೆ ಧಾವಿಸಿದ ರುಕ್ಕಮ್ಮ, ಮಲ್ಲಮ್ಮನಿಗೆ ಬೇರೆ ನೋಟು ನೀಡುವಂತೆ ಕೇಳಿದ್ದಾರೆ.

ಆಗ ಆಕೆ ನಿಮ್ಮ ಮಗಳು ನಮ್ಮ ಅಂಗಡಿಗೇ ಬಂದಿಲ್ಲ ಎಂದು ಹೇಳಿದ್ದು, ಇದರಿಂದ ಪರಸ್ಪರ ವಾಗ್ವಾದ ಶುರುವಾಗಿದೆ. ಒಂದು ಹಂತದಲ್ಲಿ ಇದು ವಿಕೋಪಕ್ಕೆ ತಿರುಗಿದಾಗ ಅಂಗಡಿಯಲ್ಲಿದ್ದ ಪೆಟ್ರೋಲ್ ಬಾಟಲಿ ಒಡೆದು ಇಬ್ಬರ ಮೈ ಮೇಲೆ ಚೆಲ್ಲಿದೆ. ಆಗ ದೇವರ ಫೋಟೋ ಮುಂದಿದ್ದ ದೀಪ ತಾಗಿ ಇಬ್ಬರಿಗೂ ಬೆಂಕಿ ಹೊತ್ತಿಕೊಂಡಿದೆ.

ಇದರಿಂದ ತೀವ್ರ ಸುಟ್ಟ ಗಾಯಗಳಾದ ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ರುಕ್ಕಮ್ಮ ಮೃತಪಟ್ಟಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...