alex Certify ಹುಬ್ಬೇರುವಂತೆ ಮಾಡಿದೆ ಚುನಾವಣೆಯಲ್ಲಿ ಸ್ಪರ್ಧಿಸಿದವನು ನೀಡಿರುವ ಭರವಸೆ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹುಬ್ಬೇರುವಂತೆ ಮಾಡಿದೆ ಚುನಾವಣೆಯಲ್ಲಿ ಸ್ಪರ್ಧಿಸಿದವನು ನೀಡಿರುವ ಭರವಸೆ….!

ಸಾಮಾನ್ಯವಾಗಿ ಉದ್ಯೋಗ, ಆರೋಗ್ಯ, ರಸ್ತೆ ಇಂತಹ ಸೌಲಭ್ಯಗಳನ್ನು ಒದಗಿಸುವ ಕುರಿತು ಎಲ್ಲರೂ ಭರವಸೆ ನೀಡುತ್ತಾರೆ. ಗೆದ್ದ ಬಳಿಕ ಅವುಗಳನ್ನು ಈಡೇರಿಸುತ್ತಾರೋ ಬಿಡುತ್ತಾರೋ ಒಟ್ಟಿನಲ್ಲಿ ಆಶ್ವಾಸನೆ ಕೊಡುವುದಕ್ಕೆ ಮಾತ್ರ ಹಿಂದೆ ಮುಂದೆ ನೋಡುವುದಿಲ್ಲ. ಆದರೆ ಇಲ್ಲೊಬ್ಬ ಅಭ್ಯರ್ಥಿ ನೀಡಿರುವ ಭರವಸೆ ಎಲ್ಲರ ಹುಬ್ಬೇರುವಂತೆ ಮಾಡಿದೆ.

ಹರಿಯಾಣದ ಸಿರ್ಸಾದ್ ಗ್ರಾಮದಲ್ಲಿ ಗ್ರಾಮ ಪಂಚಾಯಿತಿ ಚುನಾವಣೆಗೆ ಸ್ಪರ್ಧಿಸಿರುವ ಜೈ ಕರಣ್ ಲಾತಾವಾಲ ಎಂಬಾತ ಚುನಾವಣೆಯಲ್ಲಿ ತಾನು ಗೆದ್ದರೆ ಗ್ರಾಮದಲ್ಲಿ ಮೂರು ಏರ್ಪೋರ್ಟ್ ನಿರ್ಮಿಸುವುದಾಗಿ ಹೇಳಿದ್ದಾನೆ. ಅಷ್ಟೇ ಅಲ್ಲ, ಉಚಿತ ಬೈಕ್ ಹಾಗೂ ಮೇಕಪ್ ಕಿಟ್ ನೀಡುವುದಲ್ಲದೆ ಪೆಟ್ರೋಲ್ ಡೀಸೆಲ್ ಅನ್ನು 20 ರೂಪಾಯಿಗಳಿಗೆ ಮಾರಾಟ ಮಾಡುವುದಾಗಿ ತಿಳಿಸಿದ್ದಾನೆ.

ಜೊತೆಗೆ ಗ್ರಾಮದಲ್ಲಿ ಮೆಟ್ರೋ ರೈಲು ಸಂಚಾರ, ಹೆಲಿಕಾಪ್ಟರ್ ಸೇವೆ ಲಭ್ಯವಿರುವಂತೆ ಮಾಡುವುದಾಗಿ ಹೇಳಿದ್ದು, ಜಿಎಸ್‌ಟಿ ಅನ್ನು ಸಂಪೂರ್ಣವಾಗಿ ತೆಗೆಯುವುದಾಗಿ ಭರವಸೆ ನೀಡಿದ್ದಾನೆ. ಈತನ ಚುನಾವಣಾ ಪ್ರಣಾಳಿಕೆಯ ಫೋಟೋ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

— Arun Bothra 🇮🇳 (@arunbothra) October 9, 2022

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...