ಕಳೆದ ಒಂದೂವರೆ ವರ್ಷದ ಹಿಂದೆ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದ ಶ್ರೀಮತಿ ವೇದಾ, ಅವರ ಪತಿ ಶಿವಮೊಗ್ಗದ ಹೆಚ್.ಎಂ. ಮಂಜುನಾಥ ಅವರು ರಾಹುಲ್ ಗಾಂಧಿ ಅವರ ಜೊತೆಯಲ್ಲಿ ಹೆಜ್ಜೆ ಹಾಕಿದರು.
ಮಂಜುನಾಥ್ ಅವರನ್ನು ಅಪ್ಪಿ ಸಂತೈಸಿದ ರಾಹುಲ್ ಗಾಂಧಿ ಸುದೀರ್ಘವಾಗಿ ಚರ್ಚೆ ಮಾಡಿದ ಪ್ರಸಂಗ ʼಭಾರತ್ ಜೋಡೋʼ ಯಾತ್ರೆ ಚಳ್ಳಕೆರೆಯಿಂದ ಚಿತ್ರದುರ್ಗದ ಕಡೆ ಬುಧವಾರದಂದು ಸಾಗುವಾಗ ನಡೆಯಿತು. ಶ್ರೀಮತಿ ವೇದಾ ಅವರ ದೇಹದ ಐದು ಅಂಗಾಂಗಗಳನ್ನು ದಾನ ಮಾಡಿದ ಅದರ್ಶದ ಪ್ರಸಂಗವನ್ನು ರಾಹುಲ್ ಗಾಂಧಿರವರಿಗೆ ಈ ಸಂದರ್ಭದಲ್ಲಿ ವಿವರಿಸಲಾಯಿತು.
ಶ್ರೀಮತಿ ವೇದಾ ಮಂಜುನಾಥ ಅವರು ಶಿವಮೊಗ್ಗ ಎನ್.ಇ.ಎಸ್. ವಿದ್ಯಾ ಸಂಸ್ಥೆಯ ಮಾಜಿ ಕಾರ್ಯದರ್ಶಿ ಹೆಚ್.ಎಂ. ಮಲ್ಲಪ್ಪರವರ ಸೊಸೆ (ಡಾ|| ಹೆಚ್.ಎಂ ಮಂಜುನಾಥ ರವರ ಪತ್ನಿ). ಶ್ರೀಮತಿ ವೇದಾ ಮಂಜುನಾಥ ರವರು ಕಳೆದ ಒಂದೂವರೆ ವರ್ಷದ ಹಿಂದೆ ದಾವಣಗೆರೆಯಿಂದ ಗೋವಾಕ್ಕೆ ತನ್ನ ಗೆಳತಿಯರ ಜೊತೆ ಪ್ರವಾಸ ಹೋಗುವ ವೇಳೆ ಹುಬ್ಬಳ್ಳಿ-ದಾರವಾಡ ಬೈಪಾಸ್ ಹೈವೇ ರಸ್ತೆಯಲ್ಲಿ ಅವರು ಚಲಿಸುತ್ತಿದ್ದ ವಾಹನ ಭೀಕರ ಅಪಘಾತಕ್ಕೆ ಈಡಾಗಿ ವಾಹನದಲ್ಲಿದ್ದ 13 ಮಹಿಳೆಯರು ಮೃತರಾದ ಘಟನೆಯ ನಂತರದ ಸಂಧರ್ಭದಲ್ಲಿ ರಾಹುಲ್ ಗಾಂಧಿಯವರು ಟ್ವೀಟ್ ಮಾಡಿ ಸಂತಾಪ ವ್ಯಕ್ತಪಡಿಸಿದ್ದನ್ನು ಈ ಸಂದರ್ಭದಲ್ಲಿ ನೆನಪು ಮಾಡಲಾಯಿತು.
ಡಾ. ಹೆಚ್.ಎಂ. ಮಂಜುನಾಥ್ ರವರ ಅಜ್ಜ ಹೆಚ್.ಎಂ. ಮಲ್ಲಿಕಾರ್ಜುನಪ್ಪ ಎಂ.ಎಲ್.ಎ. ಆಗಿದ್ದ ಸಂದರ್ಭದಲ್ಲಿ ನಡೆದ 1978 ರಲ್ಲಿ ಚಿಕ್ಕಮಗಳೂರು ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದ್ದ ಪ್ರಧಾನಿ ಶ್ರೀಮತಿ ಇಂದಿರಾಗಾಂಧಿಯವರು ಹುಣಸಘಟ್ಟದಲ್ಲಿದ್ದ ಹೆಚ್.ಎಂ. ಮಲ್ಲಿಕಾರ್ಜುನಪ್ಪರವರ ಮನೆಯಲ್ಲಿ ವಾಸ್ತವ್ಯ ಹೂಡಿದ್ದು, ಈ ಸಂಧರ್ಭದಲ್ಲಿ ರಾಹುಲ್ ಗಾಂಧಿ ಅವರಿಗೆ ಹೇಳಲಾಯಿತು.