alex Certify ಈ ರಾಶಿಯವರಿಗೆ ಸುಧಾರಿಸಲಿದೆ ಇಂದು ಆರೋಗ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ರಾಶಿಯವರಿಗೆ ಸುಧಾರಿಸಲಿದೆ ಇಂದು ಆರೋಗ್ಯ

ಮೇಷ ರಾಶಿ

ಪರಿಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯಲಿದೆ. ಧೈರ್ಯದಿಂದ ಮುನ್ನುಗ್ಗಿ, ಸಮಯದ ಪರಿವೆ ಇರಲಿ. ಧನಲಾಭವಾಗುವ ಸಂಭವ ಇದೆ. ಅತಿಯಾದ ಭಾವುಕತೆಯಿಂದ ಆತಂಕಗೊಳ್ಳುತ್ತೀರಿ. ಯಾವ ಕಾರ್ಯದಲ್ಲೂ ಅತಿಯಾದ ಆತುರ ಬೇಡ.

ವೃಷಭ ರಾಶಿ

ಹಣ ಹೂಡಲು ಒಂದು ಅದ್ಭುತ ಉಪಾಯ ಹೊಳೆಯಲಿದೆ. ಇತರರಿಗೆ ಸಹಾಯ ಮಾಡುತ್ತೀರಿ. ಎಲ್ಲಾ ಚರ್ಚೆಗಳೂ ನಿಮ್ಮ ಪರವಾಗಿ ಇರಲಿವೆ. ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳುವ ಮುನ್ನ ಚೆನ್ನಾಗಿ ಯೋಚಿಸಿ. ಆರೋಗ್ಯ ಸುಧಾರಿಸಲಿದೆ.

ಮಿಥುನ ರಾಶಿ

ಹಣಕಾಸಿನ ವಿಷಯದಲ್ಲಿ ಎಚ್ಚರಿಕೆಯಿಂದಿರುತ್ತೀರಿ. ಹಣ ಗಳಿಸಲು ಪ್ರಯತ್ನಿಸುತ್ತೀರಿ. ಮೋಜು-ಮಸ್ತಿ ಮಾಡುವ ಬಯಕೆಯಾಗಲಿದೆ. ನೀವು ಅಂದುಕೊಂಡ ಕೆಲಸ ಪೂರ್ಣಗೊಳ್ಳಲಿದೆ. ಕೆಲವರು ನಿಮ್ಮ ಐಡಿಯಾಗಳನ್ನು ಕದಿಯಬಹುದು. ಖರ್ಚು ಕೂಡ ಹೆಚ್ಚಾಗಲಿದೆ.

ಕರ್ಕ ರಾಶಿ

ನಿಮ್ಮ ಮೇಲೆ ನಿಯಂತ್ರಣ ಇಟ್ಟುಕೊಳ್ಳಲು ಪ್ರಯತ್ನಿಸುತ್ತೀರಿ. ಆರ್ಥಿಕ ಕ್ಷೇತ್ರದಲ್ಲಿ ಉತ್ತಮ ಅವಕಾಶ ದೊರೆಯಲಿದೆ. ಹಣಕಾಸಿಗೆ ಸಂಬಂಧಪಟ್ಟ ವಿಷಯಗಳೆಲ್ಲ ಬಗೆಹರಿಯಲಿವೆ. ಕೊಂಚ ಮಾನಸಿಕ ಅಸ್ವಸ್ಥತೆ ಕಾಡುವ ಸಂಭವ ಇದೆ.

ಸಿಂಹ ರಾಶಿ

ನಿಮ್ಮ ಮೇಲೆ ನಿಮಗೆ ಭರವಸೆ ಇರಲಿ. ಹಣ ಮತ್ತು ಕಾನೂನಿಗೆ ಸಂಬಂಧಪಟ್ಟ ವಿಷಯದಲ್ಲಿ ಜಯ ಸಿಗಲಿದೆ. ಹೊಸ ಸ್ನೇಹಿತರಿಂದ ಹೊಸ ಹೊಸ ವಿಷಯ ತಿಳಿದುಕೊಳ್ಳುತ್ತೀರಿ. ಯಾವುದೇ ವಿವಾದಗಳಲ್ಲಿ ಸಿಲುಕಬೇಡಿ. ಇದರಿಂದ ಹಣ ಮತ್ತು ಸಮಯ ವ್ಯರ್ಥವಾಗಲಿದೆ.

ಕನ್ಯಾ ರಾಶಿ

ಅವಕಾಶಗಳನ್ನು ಹುಡುಕುತ್ತಲೇ ಇರಿ. ನಿಮ್ಮ ಯೋಜನೆಗಳೆಲ್ಲ ಪೂರ್ಣಗೊಳ್ಳಲಿವೆ. ನಿಮ್ಮ ಸಾಮಾಜಿಕ ಬದುಕಿನಲ್ಲಿ ಸುಧಾರಣೆಯಾಗಲಿದೆ. ಒಳ್ಳೆ ಕೆಲಸ ಮಾಡಲು ಪ್ರಯತ್ನಿಸುತ್ತೀರಿ. ಆದ್ರೆ ಕೊಂಚ ವಿಳಂಬವಾಗಬಹುದು.

ತುಲಾ ರಾಶಿ

ಖಿನ್ನತೆ ಮತ್ತು ಆಲಸ್ಯದಿಂದ ಹೊರಬರಲು ಪ್ರಯತ್ನಿಸಿ. ಹೊಸ ಸ್ನೇಹಿತರು ದೊರೆಯುವ ಸಾಧ್ಯತೆ ಇದೆ. ಹೊಸ ಅವಕಾಶವೂ ನಿಮ್ಮದಾಗಲಿದೆ. ಕೋಪವನ್ನು ಕಡಿಮೆ ಮಾಡಿಕೊಳ್ಳಿ. ಹೊಸ ಕೆಲಸವನ್ನು ಆರಂಭಿಸುವುದು ಬೇಡ.

ವೃಶ್ಚಿಕ ರಾಶಿ

ದೊಡ್ಡ ಜವಾಬ್ಧಾರಿ ಸಿಗಲಿದೆ. ಪರಿಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯುತ್ತದೆ. ಇದರಿಂದ ಬೇರೆಯವರ ಗಮನ ಸೆಳೆಯಲಿದ್ದೀರಿ. ಜೀವನದಲ್ಲಿ ಧನಾತ್ಮಕ ಬದಲಾವಣೆ ತರಲು ಪ್ರಯತ್ನಿಸಿ. ಮನಸ್ಸು ಚಂಚಲವಾಗಬಹುದು. ಜನರಿಂದ ನಿರೀಕ್ಷಿತ ಬೆಂಬಲ ದೊರೆಯುವುದಿಲ್ಲ.

ಧನು ರಾಶಿ

ನಿಮ್ಮ ಕಾರ್ಯಗಳೆಲ್ಲ ತಂತಾನೇ ಪೂರ್ಣಗೊಳ್ಳಲಿವೆ. ಒಳ್ಳೊಳ್ಳೆ ವಿಚಾರಗಳನ್ನು ಮಾಡಿ. ಆರ್ಥಿಕ ಪರಿಸ್ಥಿತಿ ಸುಧಾರಿಸಲು ಅವಕಾಶಗಳನ್ನು ಹುಡುಕಿ. ಆತ್ಮವಿಶ್ವಾಸ ಹೆಚ್ಚಲಿದೆ. ಸರಿಯಾದ ಯೋಜನೆಯಿಲ್ಲದೇ ಯಾವ ಕೆಲಸವನ್ನೂ ಮಾಡಬೇಡಿ.

ಮಕರ ರಾಶಿ

ಸ್ನೇಹಿತರ ಜೊತೆಗೆ ಪಾಲುದಾರಿಕೆಯಲ್ಲಿ ಹಣ ಗಳಿಸುವ ಅವಕಾಶ ದೊರೆಯಲಿದೆ. ಕುಟುಂಬದವರೊಂದಿಗೆ ಉತ್ತಮ ಬಾಂಧವ್ಯ ಮುಂದುವರಿಯಲಿದೆ. ಕೆಲಸದಲ್ಲಿ ಯಶಸ್ಸು ಮತ್ತು ಉತ್ತಮ ಫಲಿತಾಂಶ ದೊರೆಯಲಿದೆ. ಈ ದಿನ ಏರಿಳಿತ ಸಹಜ. ಕೆಲವೊಂದು ಗೊಂದಲವೂ ಕಾಡಬಹುದು.

ಕುಂಭ ರಾಶಿ

ಭವಿಷ್ಯದ ಬಗ್ಗೆ ಮನಸ್ಸಿನಲ್ಲಿ ಸಂದೇಹವಿದ್ದಲ್ಲಿ ಅದು ನಿವಾರಣೆಯಾಗಲಿದೆ. ಹೊಸ ಯೋಜನೆ ಮನಸ್ಸಿನಲ್ಲಿ ಮೂಡಬಹುದು. ಅದರಲ್ಲಿ ಕೊಂಚ ಬದಲಾವಣೆಯನ್ನೂ ಮಾಡಬೇಕಾಗುತ್ತದೆ. ಇತರರ ಮಾತುಗಳನ್ನು ಗಮನವಿಟ್ಟು ಕೇಳಿ. ಖರ್ಚು ಹೆಚ್ಚಾಗುವ ಸಂಭವ ಇದೆ.

ಮೀನ ರಾಶಿ

ನಿಮ್ಮ ಸಕಾರಾತ್ಮಕ ಕೆಲಸಗಳಿಂದಾಗಿ ಪರಿಸ್ಥಿತಿ ಸುಧಾರಿಸಲಿದೆ. ಹೊಸ ಜನರು, ಹೊಸ ವಿಚಾರ ನಿಮ್ಮೆದುರು ಬರಲಿದೆ. ಹಳೆಯ ಸಮಸ್ಯೆ ಕೂಡ ಪರಿಹಾರವಾಗಲಿದೆ. ಇವತ್ತಿನ ಕೆಲಸವನ್ನು ನಾಳೆಗೆ ಮುಂದೂಡಬೇಡಿ. ಹಣಕಾಸಿನ ಹಳೆ ವಿಚಾರ ಇಂದು ನಿಮ್ಮ ಮುಂದೆ ಬರಬಹುದು.

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...