alex Certify BIG NEWS: ಮದುವೆ ಆಹ್ವಾನ ಪತ್ರಿಕೆ ನೀಡುವ ನೆಪದಲ್ಲಿ ಮನೆಗೆ ಬಂದ ಕಳ್ಳರು; ಮತ್ತು ಬರುವ ಸ್ಪ್ರೇ ಹೊಡೆದು 43 ಲಕ್ಷ ರೂಪಾಯಿ ದೋಚಿ ಪರಾರಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಮದುವೆ ಆಹ್ವಾನ ಪತ್ರಿಕೆ ನೀಡುವ ನೆಪದಲ್ಲಿ ಮನೆಗೆ ಬಂದ ಕಳ್ಳರು; ಮತ್ತು ಬರುವ ಸ್ಪ್ರೇ ಹೊಡೆದು 43 ಲಕ್ಷ ರೂಪಾಯಿ ದೋಚಿ ಪರಾರಿ

ಕೋಲಾರ: ಮದುವೆ ಆಹ್ವಾನ ಪತ್ರಿಕೆ ನೀಡುವ ನೆಪದಲ್ಲಿ ಮನೆಗೆ ಬಂದ ಗುಂಪೊಂದು ಮನೆಯಲ್ಲಿದ್ದವರಿಗೆ ಮತ್ತು ಬರುವ ಸ್ಪ್ರೇ ಹೊಡೆದು 43 ಲಕ್ಷ ಹಣ ಚಿನ್ನಾಭರಣ ದರೋಡೆ ಮಾಡಿ ಪರಾರಿಯಾಗಿರುವ ಘಟನೆ ನಡೆದಿದೆ.

ಕೋಲಾರ ಜಿಲ್ಲೆಯ ಮಾಲೂರಿನ ಸಂಪಿಗೆರೆಯ ಮಂಜುನಾಥ್ ಎಂಬುವವರ ಮನೆಯಲ್ಲಿ ಈ ಕಳ್ಳತನ ನಡೆದಿದೆ. ಆಮಂತ್ರಣ ಪತ್ರಿಕೆ ಕೊಡಲೆಂದು ಬಂದ ದುಷ್ಕರ್ಮಿಗಳು, ಮಂಜುನಾಥ್ ಪತ್ನಿಗೆ ಮತ್ತು ಬರುವ ಸ್ಪ್ರೇ ಹೊಡೆದಿದ್ದು ಅವರು ಪ್ರಜ್ಞೆ ತಪ್ಪುತ್ತಿದ್ದಂತೆ ಮನೆಯಲ್ಲಿದ್ದ 43 ಲಕ್ಷ ಹಣ, 250 ಗ್ರಾಂ ಚಿನ್ನಾಭರಣ ದೋಚಿ ಪರಾರಿಯಾಗಿದೆ.

ಮಂಜುನಾಥ್ ಹಾಗೂ ಮನೆಯವರು ಜಮೀನು ಮಾರಾಟ ಮಾಡಿದ್ದ ಹಣವನ್ನು ಮನೆಯಲ್ಲಿ ತಂದು ಇಟ್ಟುದ್ದರು. ಇದೀಗ ಅದೇ ಹಣವನ್ನು ಕದ್ದು ಕಳ್ಳರು ಪರಾರಿಯಾಗಿದ್ದಾರೆ. ಮಾಲೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...