alex Certify BIG NEWS: ಬೆಟರ್ ಬೆಂಗಳೂರು ಕಾಂಗ್ರೆಸ್ ಕ್ರಿಯಾ ಸಮಿತಿ ಸದಸ್ಯರ ಚರಿತ್ರೆಯೇ ಭಯಂಕರ; ಕೈ ನಾಯಕರ ವಿರುದ್ಧ ಬಿಜೆಪಿ ವಾಗ್ದಾಳಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಬೆಟರ್ ಬೆಂಗಳೂರು ಕಾಂಗ್ರೆಸ್ ಕ್ರಿಯಾ ಸಮಿತಿ ಸದಸ್ಯರ ಚರಿತ್ರೆಯೇ ಭಯಂಕರ; ಕೈ ನಾಯಕರ ವಿರುದ್ಧ ಬಿಜೆಪಿ ವಾಗ್ದಾಳಿ

ಬೆಂಗಳೂರು: ರಾಜಕಾಲುವೆ ಒತ್ತುವರಿ ವಿಚಾರವಾಗಿ ಕಾಂಗ್ರೆಸ್ ವಿರುದ್ಧ ಆರೋಪ ಮಾಡಿರುವ ರಾಜ್ಯ ಬಿಜೆಪಿ ಬೆಟರ್ ಬೆಂಗಳೂರು ಕಾಂಗ್ರೆಸ್ ಕ್ರಿಯಾ ಸಮಿತಿ ಕುರಿತು ವಿಡಿಯೋ ಬಿಡುಗಡೆ ಮಾಡಿ ಕಿಡಿಕಾರಿದೆ.

ಬೆಟರ್‌ ಬೆಂಗಳೂರು ಅಂತ ಕಾಂಗ್ರೆಸ್‌ ಮಾಡಿಕೊಂಡಿರುವ ಕ್ರಿಯಾ ಸಮಿತಿಯ ಸದಸ್ಯರ ಚರಿತ್ರೆಯೇ ಭಯಾನಕವಾಗಿದೆ. ರಾಮಲಿಂಗಾರೆಡ್ಡಿ, ಕೆ.ಜೆ. ಜಾರ್ಜ್, ಹ್ಯಾರೀಸ್ ಸೇರಿದಂತೆ ಹಲವು ನಾಯಕರು ಸೇರಿ ಬೆಂಗಳೂರನ್ನು ಬೆಟರ್‌ ಮಾಡೋದು ಹೇಗೆ ಅಂತ ಯೋಜನೆ ಮಾಡಿ ಕೊಡ್ತಾರಂತೆ ! ಇದು ಬೆಕ್ಕು ಮೀನು ಪಾಲು ಮಾಡಿಕೊಟ್ಟಂತೆಯೇ ಸರಿ ಎಂದು ವ್ಯಂಗ್ಯವಾಡಿದೆ.

ಹಗರಣಗಳ ಸರಮಾಲೆಯನ್ನು ‘ಕೈ’ ತುಂಬಾ ಹಿಡಿದು ಓಡಾಡಿದ ಖ್ಯಾತಿ ಕಾಂಗ್ರೆಸ್ ಸರ್ಕಾರದ್ದು. ಹಗರಣ ಮಾಡಲೆಂದೇ ಅಧಿಕಾರಕ್ಕೆ ಬಂದವರಂತೆ ಭ್ರಷ್ಟರಾಮಯ್ಯ ಸರ್ಕಾರ ಆಡಳಿತ ನಡೆಸಿತ್ತು ಎಂದು ಸರಣಿ ಟ್ವೀಟ್ ಮೂಲಕ ಕಿಡಿಕಾರಿದೆ

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...