alex Certify ನೋಡ ನೋಡುತ್ತಿದ್ದಂತೆಯೇ ನವಲಗುಂದ ಬಳಿ ಬ್ರಿಡ್ಜ್ ಕುಸಿತ; ಕ್ಷಣಾರ್ಧದಲ್ಲಿ ಬಚಾವಾದ ಯುವಕ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನೋಡ ನೋಡುತ್ತಿದ್ದಂತೆಯೇ ನವಲಗುಂದ ಬಳಿ ಬ್ರಿಡ್ಜ್ ಕುಸಿತ; ಕ್ಷಣಾರ್ಧದಲ್ಲಿ ಬಚಾವಾದ ಯುವಕ

ನವಲಗುಂದ: ರಾಜ್ಯಾದ್ಯಂತ ಸುರಿಯುತ್ತಿರುವ ಭಾರೀ ಮಳೆಯಿಂದ ಜನ ಜೀವನ ಅಸ್ತವ್ಯಸ್ತವಾಗಿದೆ. ರಸ್ತೆಗಳು, ಸೇತುವೆಗಳಿಗೂ ಡ್ಯಾಮೇಜ್ ಆಗಿದ್ದು, ಅನೇಕ ಸೇತುವೆಗಳು ಕುಸಿತ ಉಂಟಾಗಿದೆ. ಅಷ್ಟೆ ಅಲ್ಲ ರಸ್ತೆ ಕಡಿತದಿಂದಾಗಿ ಸಾರಿಗೆ ವ್ಯವಸ್ಥೆಯಲ್ಲೂ ಸಮಸ್ಯೆ ಉಂಟಾಗಿದೆ.

ಮಳೆಯಿಂದ ಸೇತುವೆ ಕುಸಿತವಾಗಿ ರಸ್ತೆಯಲ್ಲಿ ಹೋಗುತ್ತಿದ್ದ ವ್ಯಕ್ತಿ‌ ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ಘಟನೆ ನವಲಗುಂದದಲ್ಲಿ ನಡೆದಿದೆ. ನವಲಗುಂದ ತಾಲೂಕಿನ ಖನ್ನೂರ ಗ್ರಾಮದ ಬಳಿಯ ಸೇತುವೆ ಭಾರೀ ಮಳೆಯಿಂದಾಗಿ ಕುಸಿದಿದೆ. ಈ ವೇಳೆ ರಸ್ತೆ ಸಂಪರ್ಕ ಕಡಿತಗೊಂಡಿದ್ದು, ನೀರಿನ ಪ್ರವಾಹದಲ್ಲಿ ಚನ್ನಬಸಪ್ಪ ದೇವಣ್ಣವರ (25) ಎಂಬಾತ ಕೊಚ್ಚಿ ಹೋಗುತ್ತಿದ್ದರು.

ಈ ವೇಳೆ ಅಲ್ಲೇ ಇದ್ದ ಮರದ ಸಹಾಯದಿಂದ ಅವರು ಬದುಕುಳಿದರು. ನಂತರ ಆತನನ್ನು ಎನ್.ಡಿ.ಆರ್.ಎಫ್, ಅಗ್ನಿಶಾಮಕ ದಳ ಹಾಗೂ ಪೋಲಿಸ್ ಸಿಬ್ಬಂದಿಗಳು ರಕ್ಷಣೆ ಮಾಡಿದ್ದಾರೆ. ಇನ್ನು ಈ ಭಾಗದಲ್ಲಿನ ಮನೆಗಳಿಗೂ ನೀರು ನುಗ್ಗಿ ಮಳೆ ಅವಾಂತರ ಸೃಷ್ಟಿ ಮಾಡಿದೆ. ಅಲ್ಲಿನ ಹಳ್ಳ, ನದಿಗಳು ತುಂಬಿ ಹಳ್ಳಿಗಳಿಗೆ ನೀರು ಹರಿದಿದೆ‌.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...