alex Certify BIG NEWS: ಗುಂಡೇಟಿನಿಂದ ಗಾಯಗೊಂಡ ಉಗ್ರನಿಗೆ ‘ರಕ್ತದಾನ’ ಮಾಡಿ ಮಾನವೀಯತೆ ಮೆರೆದ ಭಾರತೀಯ ಯೋಧರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಗುಂಡೇಟಿನಿಂದ ಗಾಯಗೊಂಡ ಉಗ್ರನಿಗೆ ‘ರಕ್ತದಾನ’ ಮಾಡಿ ಮಾನವೀಯತೆ ಮೆರೆದ ಭಾರತೀಯ ಯೋಧರು

ಅಕ್ರಮವಾಗಿ ಗಡಿ ದಾಟಿ ಭಾರತ ಪ್ರವೇಶಿಸುವ ವೇಳೆ ಯೋಧರ ಗುಂಡೇಟಿನಿಂದ ಗಾಯಗೊಂಡಿರುವ ಪಾಕ್ ಆಕ್ರಮಿತ ಕಾಶ್ಮೀರದ ಉಗ್ರನಿಗೆ ಭಾರತೀಯ ಯೋಧರು ರಕ್ತದಾನ ಮಾಡಿ ಮಾನವೀಯತೆ ಮೆರೆದಿದ್ದಾರಲ್ಲದೆ ಆತನ ಜೀವ ಉಳಿಯಲು ಕಾರಣರಾಗಿದ್ದಾರೆ.

ಈ ಘಟನೆ ಆಗಸ್ಟ್ 21ರಂದು ನಡೆದಿದ್ದು, ಪಾಕ್ ಆಕ್ರಮಿತ ಕಾಶ್ಮೀರದ ತಬ್ರಾಕ್ ಹುಸೇನ್ ಎಂಬಾತ ಗಡಿಯಲ್ಲಿದ್ದ ತಂತಿ ಬೇಲಿಯನ್ನು ಕತ್ತರಿಸಿ ಒಳಬರಲು ಯತ್ನಿಸಿದ್ದ. ಇದನ್ನು ಗಮನಿಸಿದ್ದ ಭಾರತೀಯ ಯೋಧರು ಗುಂಡು ಹಾರಿಸಿದ್ದು ಈ ವೇಳೆ ಆತ ಗಾಯಗೊಂಡರೆ ಇತರ ಇಬ್ಬರು ಪರಾರಿಯಾಗಿದ್ದರು.

ಘಟನೆ ಕುರಿತಂತೆ ಮಾಹಿತಿ ನೀಡಿರುವ ನೌಶೇರಾ ಬ್ರಿಗೇಡ್ ನ ಬ್ರಿಗೇಡಿಯರ್ ಕಪಿಲ್ ರಾಣಾ, ಉಗ್ರ ತಬ್ರಾಕ್ ಹುಸೇನ್ ನನ್ನು ಆಸ್ಪತ್ರೆಯ ಐಸಿಯು ಗೆ ದಾಖಲಿಸಲಾಗಿದೆ. ಈ ವೇಳೆ ಆತನಿಗೆ ನಮ್ಮ ಯೋಧರು ಮೂರು ಬಾಟಲಿ ರಕ್ತ ನೀಡಿದ್ದಾರೆ ಎಂದು ತಿಳಿಸಿದ್ದಾರೆ.

ಈ ಮೊದಲು 2017ರಲ್ಲೂ ತಬ್ರಾಕ್ ಹುಸೇನ್ ಹಾಗೂ ಆತನ ಅಪ್ರಾಪ್ತ ಸಹೋದರ ಗಡಿ ನುಸುಳಲು ಯತ್ನಿಸಿದ್ದು, ಮಾನವೀಯತೆ ಕಾರಣಕ್ಕೆ ಅವರನ್ನು ಕಳುಹಿಸಿಕೊಡಲಾಗಿತ್ತು ಎನ್ನಲಾಗಿದೆ. ಈ ಬಾರಿ ಪಾಕಿಸ್ತಾನದ ಅಧಿಕಾರಿಯೊಬ್ಬ 30 ಸಾವಿರ ರೂಪಾಯಿ ನೀಡಿ ಭಾರತಕ್ಕೆ ತೆರಳಿ ಉಗ್ರ ಕೃತ್ಯ ನಡೆಸುವಂತೆ ಹೇಳಿದ್ದ ಎನ್ನಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...