alex Certify ವಿದ್ಯುತ್ ಪ್ರವಹಿಸಿ ಪ್ರತಿಭಾನ್ವಿತ ಫುಟ್ಬಾಲ್ ಆಟಗಾರ ಸಾವು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿದ್ಯುತ್ ಪ್ರವಹಿಸಿ ಪ್ರತಿಭಾನ್ವಿತ ಫುಟ್ಬಾಲ್ ಆಟಗಾರ ಸಾವು

ಮಂಡ್ಯ: ವಿದ್ಯುತ್ ಪ್ರವಹಿಸಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಫುಟ್ಬಾಲ್ ಆಟಗಾರ ಎಂ.ಎನ್. ವಿಶ್ವಾಸ್(21) ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಹೊಸದಾಗಿ ನಿರ್ಮಿಸುತ್ತಿದ್ದ ಮನೆಯ ಗೋಡೆಗೆ ಜುಲೈ 1 ರಂದು ನೀರು ಹಾಕುವ ವೇಳೆ ಅವರಿಗೆ ವಿದ್ಯುತ್ ಪ್ರವಹಿಸಿ ತೀವ್ರ ಅಸ್ವಸ್ಥಗೊಂಡಿದ್ದರು. ಮೈಸೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ವಿಶ್ವಾಸ್ ಅವರ ಚಿಕಿತ್ಸೆಗಾಗಿ ಜನಪ್ರತಿನಿಧಿಗಳು, ಕ್ರೀಡಾ ಪ್ರೇಮಿಗಳು, ಸಾರ್ವಜನಿಕರು ಹಣ ನೀಡಿದ್ದರು. ವಿದ್ಯುತ್ ಶಾಕ್ ನಿಂದ ಶೇಕಡ 80 ರಷ್ಟು ಗಾಯಗೊಂಡು ಕೋಮಸ್ಥಿತಿಗೆ ತಲುಪಿದ್ದ ವಿಶ್ವಾಸ್ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಮಂಡ್ಯದ ಗುತ್ತಲ ಬಡಾವಣೆಯ ನರಸಿಂಹಮೂರ್ತಿ, ಶಾಮಲಾ ದಂಪತಿಯ ಪುತ್ರರಾದ ವಿಶ್ವಾಸ್ ಮಂಡ್ಯದ ಸ್ವರ್ಣ ಫುಟ್ಬಾಲ್ ಕ್ಲಬ್ ಪ್ರತಿನಿಧಿಸುತ್ತಿದ್ದರು. ರಾಜ್ಯಮಟ್ಟದ ಹಲವು ಪಂದ್ಯಾವಳಿಗಳಲ್ಲಿ ಭಾಗವಹಿಸಿದ್ದರು. ಪಿಇಎಸ್ ಕಾಲೇಜಿನಲ್ಲಿ ಬಿಕಾಂ ಓದುತ್ತಿದ್ದ ಅವರು ಹಲವು ಫುಟ್ಬಾಲ್ ಪಂದ್ಯಾವಳಿಗಳಲ್ಲಿ ಮೈಸೂರು ವಿವಿ ಪ್ರತಿನಿಧಿಸಿದ್ದರು. ರಾಷ್ಟ್ರಮಟ್ಟದಲ್ಲಿಯೂ ಭಾಗವಹಿಸುವ ಕನಸು ಕಂಡಿದ್ದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...