alex Certify BIG NEWS: ಪಠ್ಯಕ್ರಮ ವಿರೋಧಿಸುವವರು ರಾಷ್ಟ್ರ ವಿರೋಧಿಗಳು; ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ವಾಗ್ದಾಳಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಪಠ್ಯಕ್ರಮ ವಿರೋಧಿಸುವವರು ರಾಷ್ಟ್ರ ವಿರೋಧಿಗಳು; ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ವಾಗ್ದಾಳಿ

ಮೈಸೂರು: ಪಠ್ಯಕ್ರಮದಲ್ಲಿ ಆರ್.ಎಸ್.ಎಸ್.‌ ಸಂಸ್ಥಾಪಕ ಹೆಡ್ಗೆವಾರ್ ಭಾಷಣ ಸೇರ್ಪಡೆ ರಾಷ್ಟ್ರವಿರೋಧಿ ಧೋರಣೆ ಎಂಬ ವಿಪಕ್ಷಗಳ ಆರೋಪಕ್ಕೆ ಕಿಡಿಕಾರಿರುವ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ಪಠ್ಯಕ್ರಮವನ್ನು ವಿರೋಧಿಸುವವರು ರಾಷ್ಟ್ರವಿರೋಧಿಗಳು ಎಂದು ವಾಗ್ದಾಳಿ ನಡೆಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿರುವ ನಳೀನ್ ಕುಮಾರ್ ಕಟೀಲ್, ಪಠ್ಯಪುಸ್ತಕದಲ್ಲಿ ಆದರ್ಶ ವ್ಯಕ್ತಿಯ ವಿಚಾರಧಾರೆಗಳನ್ನು ಸೇರಿಸಲಾಗಿದೆ. ಆರ್.ಎಸ್.ಎಸ್.ಸಂಸ್ಥಾಪಕ ಹೆಡ್ಗೆವಾರ್ ಭಾಷಣ ಸೇರ್ಪಡೆ ಮಾಡಲಾಗಿದೆ. ಅದರಲ್ಲಿ ತಪ್ಪೇನಿದೆ ? ಎಂದು ಪ್ರಶ್ನಿಸಿದ್ದಾರೆ.

ಹೆಡ್ಗೆವಾರ್ ಭಾಷಣಕ್ಕೆ ವಿರೋಧ ಎನ್ನುವುದಾದರೆ ಭಾರತ ಮಾತೆಯ ಆರಾಧನೆ ಸಹ ರಾಷ್ಟ್ರ ವಿರೋಧಿಯೆ ಹಾಗಾದರೆ ? ಯಾರು ಪಠ್ಯಪುಸ್ತಕ ಬರೆದರು ಎಂಬುದು ಮುಖ್ಯವಲ್ಲ. ಪಠ್ಯಪುಸ್ತಕದ ಒಳಗಿನ ಆದರ್ಶದ ವಿಚಾರಗಳು ಮುಖ್ಯ. ವಿಷಯ ಅರಿಯದೇ ಮಾತನಾಡುವವನು ರಾಷ್ಟ್ರ ವಿರೋಧಿ ಎಂದು ಗುಡುಗಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...