alex Certify ವಿಮಾನ ಪತನ: ಪೈಲಟ್‌ ನಿಂದ 85 ಕೋಟಿ ರೂ. ನಷ್ಟ ಪರಿಹಾರ ಪಡೆಯಲು ಮುಂದಾದ ಎಂ.ಪಿ. ಸರ್ಕಾರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿಮಾನ ಪತನ: ಪೈಲಟ್‌ ನಿಂದ 85 ಕೋಟಿ ರೂ. ನಷ್ಟ ಪರಿಹಾರ ಪಡೆಯಲು ಮುಂದಾದ ಎಂ.ಪಿ. ಸರ್ಕಾರ

ಗ್ವಾಲಿಯರ್: ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ವಿಮಾನ ಅಪಘಾತಕ್ಕೀಡಾಗಿದ್ದು, ಇದರಿಂದ  ರಾಜ್ಯ ಸರ್ಕಾರಕ್ಕೆ 85 ಕೋಟಿ ರೂ.ನಷ್ಟವಾಗಿದೆ ಎಂಬ ಆರೋಪವನ್ನು ಪೈಲಟ್ ತಳ್ಳಿಹಾಕಿದ್ದಾರೆ.

ಕಳೆದ ವಾರ ಮಧ್ಯಪ್ರದೇಶ ಸರ್ಕಾರವು ಕ್ಯಾಪ್ಟನ್ ಮಜೀದ್ ಅಖ್ತರ್ ಅವರಿಗೆ ನಷ್ಟ ಭರಿಸುವಂತೆ ಚಾರ್ಜ್ ಶೀಟ್ ನೀಡಿದೆ. 2021ರ ಮೇ 6 ರಂದು ಗ್ವಾಲಿಯರ್‌ನಲ್ಲಿ ಸಂಭವಿಸಿದ ವಿಮಾನ ಅಪಘಾತದಿಂದಾಗಿ ಸುಮಾರು 60 ಕೋಟಿ ರೂ. ವೆಚ್ಚದ ವಿಮಾನ ಸ್ಕ್ರಾಪ್ ಆಗಿದೆ ಎಂದು ಆರೋಪಿಸಿದೆ. ಇದರ ಪರಿಣಾಮವಾಗಿ ಇನ್ನೂ 25 ಕೋಟಿ ರೂ. ವೆಚ್ಚವಾಗುತ್ತದೆ ಎಂದು ಸರ್ಕಾರ ಹೇಳಿದೆ.

ಕುತೂಹಲಕಾರಿಯಾಗಿ, ಕಡ್ಡಾಯ ವಿಮಾ ಪ್ರೋಟೋಕಾಲ್‌ಗಳನ್ನು ಅನುಸರಿಸದೆ ಬೀಚ್ ಕ್ರಾಫ್ಟ್ ಕಿಂಗ್ ಏರ್ ಬಿ 250 ಜಿಟಿಯನ್ನು ಹೇಗೆ ಹಾರಲು ಅನುಮತಿಸಲಾಗಿದೆ ಎಂಬುದರ ಕುರಿತು ರಾಜ್ಯ ಸರ್ಕಾರ ಮೌನವಾಗಿದೆ.

ಬಿಜೆಪಿ ಶಾಸಕ ಯತ್ನಾಳ್ ಗೆ ಜೀವ ಬೆದರಿಕೆ: ಮೂವರು ಅರೆಸ್ಟ್

ಗ್ವಾಲಿಯರ್ ವಿಮಾನ ನಿಲ್ದಾಣದಲ್ಲಿ ಅಳವಡಿಸಲಾದ ಅರೆಸ್ಟರ್ ತಡೆಗೋಡೆಯಿಂದ ಅಪಘಾತ ಸಂಭವಿಸಿದೆ. ಅದರ ಬಗ್ಗೆ ಏರ್ ಟ್ರಾಫಿಕ್ ಕಂಟ್ರೋಲರ್ (ಎಟಿಸಿ) ಅವರಿಗೆ ತಿಳಿಸಲಾಗಿಲ್ಲ ಎಂದು ಕ್ಯಾಪ್ಟನ್ ಮಜೀದ್ ಅಖ್ತರ್ ಅವರು ತಿಳಿಸಿದ್ದಾರೆ. ಕ್ಯಾಪ್ಟನ್ ಮಜೀದ್ 27 ವರ್ಷಗಳ ಪೈಲಟ್ ಅನುಭವ ಹೊಂದಿದ್ದಾರೆ. ಇವರು ಗ್ವಾಲಿಯರ್ ಎಟಿಸಿಯಿಂದ ಪಡೆದ ಕಪ್ಪು ಪೆಟ್ಟಿಗೆಯಲ್ಲಿರುವ ಮಾಹಿತಿಯನ್ನು ತನಗೆ ಒದಗಿಸಿಲ್ಲ ಎಂದು ಆರೋಪಿಸಿದ್ದಾರೆ.

ವಿಮಾನ ಅಪಘಾತ ತನಿಖಾ ಬ್ಯೂರೋದ ವಿಚಾರಣೆ ಬಾಕಿ ಇರುವಂತೆಯೇ ಕ್ಯಾಪ್ಟನ್ ಮಜೀದ್ ಅವರ ಪರವಾನಗಿಯನ್ನು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ ಅಮಾನತುಗೊಳಿಸಿದೆ.

ಅಪಘಾತ ಸಂಭವಿಸಿದಾಗ ವಿಮಾನವು ಎರಡನೇ ಕೋವಿಡ್-19 ಅಲೆಯ ಉತ್ತುಂಗದಲ್ಲಿದ್ದ ಸಮಯದಲ್ಲಿ, ಅಹಮದಾಬಾದ್‌ನಿಂದ ಇಂದೋರ್ ಮೂಲಕ ಗ್ವಾಲಿಯರ್‌ಗೆ 71 ರೆಮ್‌ಡೆಸಿವಿರ್ ಬಾಕ್ಸ್‌ಗಳನ್ನು ಹೊತ್ತೊಯ್ಯುತ್ತಿತ್ತು. ರಾಜ್ಯದ ವಿವಿಧ ಭಾಗಗಳಲ್ಲಿ ತುರ್ತು ಔಷಧಿಗಳನ್ನು ತಲುಪಿಸಬೇಕಾದ ಸಂದರ್ಭದಲ್ಲಿ ಪಿಪಿಇ ಕಿಟ್‌ನಲ್ಲಿ ಹಾರಾಟ ನಡೆಸಿದ ಪೈಲಟ್‌ಗಳಲ್ಲಿ ಕ್ಯಾಪ್ಟನ್ ಮಜೀದ್ ಒಬ್ಬರು ಎಂಬುದನ್ನು ಸ್ಮರಿಸಬಹುದು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...