
ಪರಿಸರ ವಕೀಲಿಕೆ ಗುಂಪು ಗ್ರೀನ್ಪೀಸ್ ಪ್ರಸ್ತುತಪಡಿಸಿದ ವರದಿಯ ಪ್ರಕಾರ, ಬೆಂಗಳೂರು ಸೇರಿದಂತೆ ದಕ್ಷಿಣ ಭಾರತದ ಹತ್ತು ಪ್ರಮುಖ ನಗರಗಳಲ್ಲಿ ಮಾಲಿನ್ಯದ ಮಟ್ಟವು ವಿಶ್ವ ಆರೋಗ್ಯ ಸಂಸ್ಥೆ (WHO) ಮಾನದಂಡಗಳಿಗಿಂತ ಹೆಚ್ಚಾಗಿದೆ. ಸಾರ್ವಜನಿಕ ಆರೋಗ್ಯದ ಬಿಕ್ಕಟ್ಟಾಗಿರುವ ವಾಯು ಮಾಲಿನ್ಯವು ಉತ್ತರ ಭಾರತದ ನಗರಗಳಿಗೆ ಮಾತ್ರ ಸೀಮಿತವಾಗಿಲ್ಲ ಎಂದು ವರದಿ ಒತ್ತಿಹೇಳುತ್ತದೆ.
ಇತ್ತೀಚಿನ ಮಾಹಿತಿಯ ಪ್ರಕಾರ, ಕೊಯಮತ್ತೂರು, ಬೆಂಗಳೂರು, ಮಂಗಳೂರು ಮತ್ತು ಅಮರಾವತಿ ನಗರಗಳ ವಾರ್ಷಿಕ ಪಿಎಂ2.5 ಮಟ್ಟಗಳು ವಿಶ್ವ ಆರೋಗ್ಯ ಸಂಸ್ಥೆ ಮಾರ್ಗಸೂಚಿಗಳಾದ 5ಮೈಕ್ರೋಗ್ರಾಂ/ಘನಮೀಟರ್ನ ಆರರಿಂದ ಏಳು ಪಟ್ಟು ಮೀರಿದೆ. ಏತನ್ಮಧ್ಯೆ, ಮೈಸೂರು, ಕೊಚ್ಚಿ, ಚೆನ್ನೈ ಮತ್ತು ಪಾಂಡಿಚೇರಿ ಸೇರಿದಂತೆ ಕೆಲ ನಗರಗಳಲ್ಲಿ, ಪಿಎಂ2.5 ಮಟ್ಟವು ಮಾರ್ಗಸೂಚಿಯ ನಾಲ್ಕರಿಂದ ಐದು ಪಟ್ಟು ಮೀರಿದೆ.
ಒಂದೇ ಮೊಬೈಲ್ ಸಂಖ್ಯೆಯಲ್ಲಿ ಇಡೀ ಕುಟುಂಬಕ್ಕೆ ʼಆಧಾರ್ʼ ಪಿವಿಸಿ ಪಡೆಯಲು ಇಲ್ಲಿದೆ ಟಿಪ್ಸ್
ಬೆಂಗಳೂರು, ಹೈದರಾಬಾದ್, ಚೆನ್ನೈ, ಅಮರಾವತಿ, ವಿಶಾಖಪಟ್ಟಣಂ, ಕೊಚ್ಚಿ, ಮಂಗಳೂರು, ಪುದುಚೇರಿ, ಕೊಯಮತ್ತೂರು ಮತ್ತು ಮೈಸೂರು ಸೇರಿ ಹತ್ತು ನಗರಗಳಿಂದ ವಾಯುಮಾಲಿನ್ಯದ ಮಾಹಿತಿ, ಜನಸಂಖ್ಯೆ ಮತ್ತು ಮೇಲ್ವಿಚಾರಣಾ ಕೇಂದ್ರ ಜಾಲಗಳ ಲಭ್ಯತೆಯ ಆಧಾರದ ಮೇಲೆ ದತ್ತಾಂಶಗಳನ್ನು ಆಯ್ಕೆ ಮಾಡಿ ವಿಶ್ಲೇಷಿಸಲಾಗಿದೆ. ಕೋವಿಡ್ ಪ್ರೇರಿತ ಲಾಕ್ಡೌನ್ಗಳು ಮತ್ತು ಬಹಳಷ್ಟು ಆರ್ಥಿಕ ಚಟುವಟಿಕೆಗಳಲ್ಲಿ ತಗ್ಗುವಿಕೆಯ ಹೊರತಾಗಿಯೂ, ಪಿಎಂ2.5 ಮತ್ತು ಪಿಎಂ10 ಮಾಲಿನ್ಯಕಾರಕಗಳ ವಾರ್ಷಿಕ ಸರಾಸರಿಗಳು ವಿಶ್ವ ಆರೋಗ್ಯ ಸಂಸ್ಥೆಯ ಪರಿಷ್ಕೃತ ಮಾನದಂಡಗಳನ್ನು ಹಲವು ಪಟ್ಟು ಮೀರಿದೆ ಎಂದು ವಿಶ್ಲೇಷಣೆ ಬಹಿರಂಗಪಡಿಸಿದೆ.
ಬೆಂಗಳೂರು, ಮಂಗಳೂರು, ಅಮರಾವತಿ, ಚೆನ್ನೈ ಮತ್ತು ಕೊಚ್ಚಿಯಲ್ಲಿ ಮೂರರಿಂದ ನಾಲ್ಕು ಪಟ್ಟು ಮಿತಿ ಮೀರಿದ ದತ್ತಾಂಶ ದಾಖಲಾಗಿದೆ ಎಂದು ವರದಿ ಸೂಚಿಸಿದೆ. ಹದಗೆಡುತ್ತಿರುವ ಗಾಳಿಯ ಗುಣಮಟ್ಟಕ್ಕೆ ಪ್ರಮುಖ ಕಾರಣವೆಂದರೆ ಕೈಗಾರಿಕೆಗಳು, ಸಾರಿಗೆ, ತ್ಯಾಜ್ಯವನ್ನು ಸುಡುವುದು, ನಿರ್ಮಾಣ ಚಟುವಟಿಕೆಗಳು ಇತ್ಯಾದಿ ಆಗಿವೆ. ಇದಲ್ಲದೆ, ವಾಯು ಮಾಲಿನ್ಯಕ್ಕೆ ನಿರಂತರವಾಗಿ ಒಡ್ಡಿಕೊಳ್ಳುವುದರಿಂದ ಅಸ್ತಮಾ, ಖಿನ್ನತೆ, ಶ್ವಾಸಕೋಶದ ಕ್ಯಾನ್ಸರ್, ಪಾರ್ಶ್ವವಾಯು ಮತ್ತು ಅಕಾಲಿಕ ಮರಣಕ್ಕೆ ಕಾರಣವಾಗಬಹುದು.
ಬೆಂಗಳೂರಿನ ಮಾಲಿನ್ಯ ಮೇಲ್ವಿಚಾರಣಾ ಕೇಂದ್ರಗಳ ಪ್ರಕಾರ, ಪಿಎಂ2.5 ಮತ್ತು ಪಿಎಂ10 ಸರಾಸರಿಗಳು ವಿಶ್ವ ಆರೋಗ್ಯ ಸಂಸ್ಥೆಯ ಪರಿಷ್ಕೃತ ಮಾನದಂಡಗಳಿಗಿಂತ ಹೆಚ್ಚಾಗಿದೆ.
ಬೆಂಗಳೂರಿನಲ್ಲಿ ವಾಯು ಮಾಲಿನ್ಯಕ್ಕೆ ವಾಹನಗಳ ಹೊರಸೂಸುವಿಕೆಯೇ ದೊಡ್ಡ ಕೊಡುಗೆ ಎಂಬುದನ್ನು ಗಮನಿಸಬೇಕು. ಹಿಂದೂಸ್ತಾನ್ ಟೈಮ್ಸ್ ಪ್ರಕಟಿಸಿದ ವರದಿಯು ಕೋವಿಡ್-19 ಬೆಂಗಳೂರಿನಲ್ಲಿ ಹದಗೆಡುತ್ತಿರುವ ಗಾಳಿಯ ಗುಣಮಟ್ಟದ ಮೇಲೆ ಪರಿಣಾಮ ಬೀರುತ್ತದೆ ಎಂದು ಸೂಚಿಸುತ್ತದೆ. ಕೋವಿಡ್-19 ಭಯ ಮತ್ತು ಆರೋಗ್ಯ ಸಂಬಂಧಿ ಇತರೆ ಅಪಾಯಗಳಿಂದಾಗಿ ಹೆಚ್ಚಿನ ಜನರು ಖಾಸಗಿ ವಾಹನಗಳನ್ನು ಆರಿಸಿಕೊಳ್ಳುತ್ತಿರುವುದರಿಂದ ನಗರದ ಬೀದಿಗಳು ವಾಹನಗಳಿಂದ ಗದ್ದಲದಿಂದ ಕೂಡಿವೆ.