alex Certify ಸಮಾಜವಾದಿ ಪಕ್ಷದೊಂದಿಗೆ ಮೈತ್ರಿ ಘೋಷಿಸಿದ ಭೀಮ್​ ಆರ್ಮಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಮಾಜವಾದಿ ಪಕ್ಷದೊಂದಿಗೆ ಮೈತ್ರಿ ಘೋಷಿಸಿದ ಭೀಮ್​ ಆರ್ಮಿ


ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯ ಹೊಸ್ತಿಲಲ್ಲೇ ಭೀಮ್​ ಆರ್ಮಿ ಮುಖ್ಯಸ್ಥ ಚಂದ್ರ ಶೇಖರ ಆಜಾದ್​​​ ಸಮಾಜವಾದಿ ಪಕ್ಷದೊಂದಿಗೆ ತಾವು ಮೈತ್ರಿ ಮಾಡಿಕೊಂಡಿರುವ ಬಗ್ಗೆ ಅಧಿಕೃತ ಮಾಹಿತಿ ನೀಡಿದ್ದಾರೆ. ಸಮಾಜವಾದಿ ಪಕ್ಷದೊಂದಿಗೆ ಸೇರಿ ಈ ಬಾರಿಯ ವಿಧಾನಸಭಾ ಚುನಾವಣೆಯನ್ನು ಎದುರಿಸಲಿದ್ದೇವೆ ಎಂದು ಚಂದ್ರಶೇಖರ್​ ಆಜಾದ್​ ಹೇಳಿದ್ದಾರೆ.

ಇಂದು ಮಧ್ಯಾಹ್ನ12:30ರ ಸುಮಾರಿಗೆ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್​ ಯಾದವ್​ ಹಾಗೂ ಚಂದ್ರಶೇಖರ್​ ಆಜಾದ್​ ಸುದ್ದಿಗೋಷ್ಠಿಯನ್ನು ನಡೆಸಲಿದ್ದಾರೆ.

ಈ ವಿಚಾರವಾಗಿ ಮಾಧ್ಯಮಗಳ ಜೊತೆಯಲ್ಲಿ ಮಾತನಾಡಿದ ಚಂದ್ರ ಶೇಖರ್​ ಆಜಾದ್​, ಸಮಾಜವಾದಿ ಹಾಗೂ ಭೀಮ್​ ಆರ್ಮಿ ನಡುವಿನ ಮೈತ್ರಿ ಧೃಡಪಟ್ಟಿದೆ. ಹೀಗಾಗಿಯೇ ನಾವು ಸುದ್ದಿಗೋಷ್ಠಿಯನ್ನು ನಡೆಸಲಿದ್ದೇವೆ ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಸೀಟು ಹಂಚಿಕೆಯ ಒಪ್ಪಂದಗಳ ಬಗ್ಗೆಯೂ ವಿವರಣೆ ನೀಡುವುದಾಗಿ ಆಜಾದ್​ ಹೇಳಿದ್ದಾರೆ.

ಕೋವಿಡ್​ 19 ಮಾರ್ಗಸೂಚಿ ಹಾಗೂ ಸೆಕ್ಷನ್​ 144ರ ಅಡಿಯಲ್ಲಿ ಆಜಾದ್​ ಅವರ ಲಕ್ನೋ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಲು ಪೊಲೀಸರು ಅನುಮತಿ ನಿರಾಕರಿಸಿದ್ದಾರೆ. ಈ ಸಂಬಂಧ ಪಕ್ಷಕ್ಕೆ ಈ ಹಿಂದೆಯೇ ನೋಟಿಸ್​ ನೀಡಲಾಗಿತ್ತಾದರೂ ಅವರು ಅದನ್ನು ನಿರ್ಲಕ್ಷಿಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...