
ಬೆಂಗಳೂರು: ರಾಜ್ಯದಲ್ಲಿ ಎಂದು 322 ಜನರಿಗೆ ಕೊರೋನಾ ಪಾಸಿಟಿವ್ ವರದಿ ಬಂದಿದ್ದು, ಮೂವರು ಮೃತಪಟ್ಟಿದ್ದಾರೆ.
176 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಇದುವರೆಗೆ 38,196 ಸೋಂಕಿತರು ಸಾವನ್ನಪ್ಪಿದ್ದು, 29,50,306 ಜನ ಗುಣಮುಖರಾಗಿದ್ದಾರೆ. ಒಟ್ಟು ಸೋಂಕಿತರ ಸಂಖ್ಯೆ 29,95,285 ಕ್ಕೆ ಏರಿಕೆಯಾಗಿದೆ ಪಾಸಿಟಿವಿಟಿ ದರ ಶೇಕಡ 0.34 ರಷ್ಟು ಇದೆ. ರಾಜ್ಯದಲ್ಲಿ 6754 ಸಕ್ರಿಯ ಪ್ರಕರಣಗಳು ಇವೆ.
ರಾಜಧಾನಿ ಬೆಂಗಳೂರಿನಲ್ಲಿ ಇಂದು ಹೊಸದಾಗಿ 149 ಜನರಿಗೆ ಕೊರೊನಾ ಸೋಂಕು ತಗುಲಿದ್ದು, 105 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. 5279 ಸಕ್ರಿಯ ಪ್ರಕರಣಗಳು ಇವೆ.
ಬಾಗಲಕೋಟೆ, ಬಳ್ಳಾರಿ, ದಾವಣಗೆರೆ, ಹಾವೇರಿ, ಕಲಬುರ್ಗಿ, ರಾಯಚೂರು, ರಾಮನಗರ, ವಿಜಯಪುರ, ಯಾದಗಿರಿ ಜಿಲ್ಲೆಗಳಲ್ಲಿ ಇಂದು ಯಾವುದೇ ಪ್ರಕರಣ ವರದಿಯಾಗಿಲ್ಲ. ಬೆಂಗಳೂರು ನಗರ 149, ದಕ್ಷಿಣಕನ್ನಡ 13, ಧಾರವಾಡ 76, ಮೈಸೂರು 27 ಹೊಸ ಪ್ರಕರಣ ವರದಿಯಾಗಿವೆ. ಚಿತ್ರದುರ್ಗ, ಧಾರವಾಡ, ತುಮಕೂರು ಜಿಲ್ಲೆಯಲ್ಲಿ ತಲಾ ಒಬ್ಬರು ಮೃತಪಟ್ಟಿದ್ದಾರೆ.

