alex Certify ರೈತರಿಗೆ ಮತ್ತೊಂದು ಬಿಗ್ ಶಾಕ್: ಭಾರಿ ಕುಸಿತ ಕಂಡ ಮೆಕ್ಕೆಜೋಳದ ಬೆಲೆ, ದಿನೇ ದಿನೇ ದರ ಇಳಿಕೆಯಿಂದ ಬೆಳೆಗಾರರು ಕಂಗಾಲು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರೈತರಿಗೆ ಮತ್ತೊಂದು ಬಿಗ್ ಶಾಕ್: ಭಾರಿ ಕುಸಿತ ಕಂಡ ಮೆಕ್ಕೆಜೋಳದ ಬೆಲೆ, ದಿನೇ ದಿನೇ ದರ ಇಳಿಕೆಯಿಂದ ಬೆಳೆಗಾರರು ಕಂಗಾಲು

ಗದಗ: ಮೆಕ್ಕೆಜೋಳ ಬೆಲೆ ಕುಸಿತವಾಗಿದ್ದು, ರೈತರು ಕಂಗಾಲಾಗಿದ್ದಾರೆ. ರೋಣ ತಾಲ್ಲೂಕಿನಲ್ಲಿ ಭಾರಿ ಮಳೆಯಾದ ಕಾರಣ ಮೆಕ್ಕೆಜೋಳ ಇಳುವರಿ ಕುಂಠಿತವಾಗಿದೆ. ಇದೇ ವೇಳೆ ಕೈಗೆ ಸಿಕ್ಕ ಅಲ್ಪಸ್ವಲ್ಪ ಮೆಕ್ಕೆಜೋಳಕ್ಕೆ ಬೆಲೆ ಕಡಿಮೆಯಾಗಿರುವುದು ರೈತರಿಗೆ ಶಾಕ್ ನೀಡಿದೆ.

ಆಗಸ್ಟ್ ಮತ್ತು ಸೆಪ್ಟೆಂಬರ್ ನಲ್ಲಿ ಒಂದು ಕ್ವಿಂಟಲ್ ಮೆಕ್ಕೆಜೋಳಕ್ಕೆ 2,600 ರೂಪಾಯಿ ದರ ಇತ್ತು. 2 ವಾರಗಳ ಹಿಂದೆ ದರ ಕುಸಿತವಾಗಿ 2000 ರೂಪಾಯಿಗೆ ಇಳಿದಿದ್ದು, ಕಳೆದ ವಾರ ಮತ್ತಷ್ಟು ಕಡಿಮೆಯಾಗಿ 1800 ರೂ.ಗೆ ಇಳಿದಿದೆ. ಬುಧವಾರದಿಂದ 1500 ರೂ.ಗೆ ಇಳಿದಿದೆ. ಹೀಗೆ ಮೆಕ್ಕೆಜೋಳದ ಬೆಲೆ ದಿನೇ ದಿನೇ ಕುಸಿಯುತ್ತಿರುವುದರಿಂದ ರೈತರಲ್ಲಿ ಆತಂಕ ಮೂಡಿಸಿದೆ.

ಸಾಲ ಮಾಡಿ ಬೀಜ, ಗೊಬ್ಬರ, ಬೇಸಾಯ ಕೂಲಿಗೆ ಖರ್ಚು ಮಾಡಿದ ಹಣ ಕೂಡ ಸಿಗದಂತಾಗಿದೆ. ಮಳೆಯಿಂದಾಗಿ ಜಮೀನುಗಳಲ್ಲಿ ನೀರು ನಿಂತು ಇಳುವರಿ ಕುಂಠಿತವಾಗಿದೆ. ಸಿಕ್ಕ ಅಲ್ಪಸ್ವಲ್ಪ ಬೆಳೆಗೆ ಬೆಲೆ ಇಲ್ಲದಂತಾಗಿ ರೈತರಿಗೆ ಆತಂಕ ಉಂಟುಮಾಡಿದೆ ಎನ್ನಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...