alex Certify RSS ಬಗ್ಗೆ ಕುಮಾರಸ್ವಾಮಿ ಹೇಳಿಕೆ ಖುಷಿ ತಂದಿದೆ ಎಂದ ಮಾಜಿ ಸಚಿವ ಸವದಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

RSS ಬಗ್ಗೆ ಕುಮಾರಸ್ವಾಮಿ ಹೇಳಿಕೆ ಖುಷಿ ತಂದಿದೆ ಎಂದ ಮಾಜಿ ಸಚಿವ ಸವದಿ

ಬೆಂಗಳೂರು: ದೇಶದಲ್ಲಿರುವ 4 ಸಾವಿರ ಐಎಎಸ್, ಐಪಿಎಸ್ ಅಧಿಕಾರಿಗಳು ಆರ್.ಎಸ್.ಎಸ್ ಕಾರ್ಯಕರ್ತರು ಎಂಬ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರ ಹೇಳಿಕೆ ಸಂತಸ ತಂದಿದೆ ಎಂದು ಮಾಜಿ ಸಚಿವ ಲಕ್ಷ್ಮಣ ಸವದಿ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಸವದಿ, ದೇಶದಲ್ಲಿರುವ 4 ಸಾವಿರ ಸಿವಿಲ್ ಅಧಿಕಾರಿಗಳು ಆರ್.ಎಸ್.ಎಸ್. ನಿಂದ ಬಂದವರು ಎಂದರೆ ನಿಜಕ್ಕೂ ಸಂತಸದ ವಿಚಾರ. ಆರ್ ಎಸ್.ಎಸ್. ಕಾರ್ಯಕರ್ತರು ಎಂದರೆ ಶಿಸ್ತಿನ ಸಿಪಾಯಿಗಳು. ಆರ್.ಎಸ್.ಎಸ್. ನವರು ಅಧಿಕಾರಿಗಳಾದರೆ ಶಿಸ್ತು ಇರುತ್ತದೆ. ಹಾಗಾಗಿ ಅಂತಹ ಅಧಿಕಾರಿಗಳಿಂದ ಆಡಳಿತಕ್ಕೆ ಸಹಕಾರಿ ಎಂದರು.

2700 ವರ್ಷಗಳ ಹಿಂದೆ ಬಳಕೆಯಲ್ಲಿದ್ದ ಟಾಯ್ಲೆಟ್‌ ಪತ್ತೆ…!

ಆರ್.ಎಸ್.ಎಸ್. ಯುವಕರು ಅಧಿಕಾರಿಗಳಾಗಿದ್ದರೆ ಅಂತವರನ್ನು ಕರೆತಂದು ನಾನೇ ಸ್ವತಃ ಸನ್ಮಾನ ಮಾಡುತ್ತೇನೆ. ಆದರೆ ಕುಮಾರಸ್ವಾಮಿಯವರ ಆರೋಪದಲ್ಲಿ ಹುರುಳಿಲ್ಲ. ಯಾವುದೇ ಇನ್ ಸ್ಟಿಟ್ಯೂಟ್ ಗಳಲ್ಲಿ ಆರ್.ಎಸ್.ಎಸ್. ತಂಡದವರಿಂದ ತರಬೇತಿ ನೀಡಲಾಗುತ್ತಿದೆ ಎಂಬುದು ಸುಳ್ಳು ಎಂದು ತಿರುಗೇಟು ನೀಡಿದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...