alex Certify ‘ಕೊರೊನಾ’ ಕಾರಣಕ್ಕೆ ಸಿಎ ಪರೀಕ್ಷೆ ವಂಚಿತರಾದವರಿಗೆ ಇಲ್ಲಿದೆ ಮಹತ್ವದ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಕೊರೊನಾ’ ಕಾರಣಕ್ಕೆ ಸಿಎ ಪರೀಕ್ಷೆ ವಂಚಿತರಾದವರಿಗೆ ಇಲ್ಲಿದೆ ಮಹತ್ವದ ಮಾಹಿತಿ

ಕಳೆದ ವರ್ಷದ ಆರಂಭದಲ್ಲಿ ದೇಶದಲ್ಲಿ ಕಾಣಿಸಿಕೊಂಡಿರುವ ಕೊರೊನಾ ಮಹಾಮಾರಿ ಇನ್ನೂ ಸಹ ಬೆಂಬಿಡದಂತೆ ಕಾಡುತ್ತಿದೆ. ಈಗಾಗಲೇ ಎರಡು ಅಲೆಗಳಿಂದ ಸಾರ್ವಜನಿಕರು ತತ್ತರಿಸಿಹೋಗಿದ್ದು, ಸಾಕಷ್ಟು ಸಾವು – ನೋವುಗಳಿಗೆ ಕಾರಣವಾಗಿದೆ. ಇದರ ಮಧ್ಯೆ ಈಗ ಮೂರನೇ ಅಲೆಯ ಭೀತಿಯೂ ಕಾಡುತ್ತಿದೆ.

ಸದ್ಯ ಎರಡನೇ ಅಲೆ ಇಳಿಕೆಯಾಗಿದ್ದು, ಹೀಗಾಗಿ ಕೊರೊನಾ ಕಾರಣಕ್ಕೆ ಅತಿ ಹೆಚ್ಚು ಸಂಕಷ್ಟಕ್ಕೆ ಒಳಗಾಗಿದ್ದ ಶೈಕ್ಷಣಿಕ ಚಟುವಟಿಕೆಗಳು ಕ್ರಮೇಣ ಹಳಿಗೆ ಬರುತ್ತಿದ್ದು, ಶಾಲಾ – ಕಾಲೇಜುಗಳು ಆರಂಭವಾಗುತ್ತಿವೆ. ಇದರ ಮಧ್ಯೆ ಜುಲೈ ತಿಂಗಳು ಸಿಎ ಪರೀಕ್ಷೆಗೆ ಹಾಜರಾಗಿದ್ದ ವಿದ್ಯಾರ್ಥಿಗಳಿಗೆ ಮಹತ್ವದ ಮಾಹಿತಿ ಇಲ್ಲಿದೆ.

ಭಾರತೀಯ ಲೆಕ್ಕ ಪರಿಶೋಧಕರ ಸಂಸ್ಥೆಯು, ಕೋವಿಡ್ ಕಾರಣದಿಂದ ಕಳೆದ ತಿಂಗಳು ಸಿಎ ಪರೀಕ್ಷೆಗೆ ಹಾಜರಾಗದಿದ್ದ ಅಭ್ಯರ್ಥಿಗಳಿಗೆ ಅವಕಾಶ ನೀಡುವ ಭರವಸೆಯನ್ನು ನೀಡಿದೆ. ಈ ಕುರಿತು ಗುರುವಾರದಂದು ಸುಪ್ರೀಂ ಕೋರ್ಟಿಗೆ ಮಾಹಿತಿ ನೀಡಲಾಗಿದ್ದು, ಸದ್ಯದಲ್ಲೇ ಆದೇಶ ಹೊರಬೀಳುವ ನಿರೀಕ್ಷೆ ಇದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...