alex Certify BIG NEWS: ನನ್ನ ವಿರುದ್ಧ ಕ್ಯಾತೆ ತೆಗೆದವರು ಕಣ್ಮರೆಯಾಗಿದ್ದಾರೆ; ಸಂಸದೆ ಸುಮಲತಾ ವಿರುದ್ಧ ಪುಟ್ಟರಾಜು ಪರೋಕ್ಷ ವಾಗ್ದಾಳಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ನನ್ನ ವಿರುದ್ಧ ಕ್ಯಾತೆ ತೆಗೆದವರು ಕಣ್ಮರೆಯಾಗಿದ್ದಾರೆ; ಸಂಸದೆ ಸುಮಲತಾ ವಿರುದ್ಧ ಪುಟ್ಟರಾಜು ಪರೋಕ್ಷ ವಾಗ್ದಾಳಿ

ಮೈಸೂರು: ಸಂಸದೆ ಸುಮಲತಾ ಹಾಗೂ ಜೆಡಿಎಸ್ ನಾಯಕರ ನಡುವಿನ ವಾಕ್ಸಮರ ಮತ್ತೆ ಮುಂದುವರೆದಿದೆ. ಸುಮಲತಾ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ ಶಾಸಕ ಪುಟ್ಟರಾಜು, ನನ್ನನ್ನು ಟಾರ್ಗೆಟ್ ಮಾಡಲು ಬಂದವರು ಮಣ್ಣಲ್ಲಿ ಮಣ್ಣಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗಣಿಗಾರಿಕೆ ವಿಚಾರದಲ್ಲಿ ಯಾರೇ ಅಕ್ರಮ ಮಾಡಿದರೂ ಮುಲಾಜಿಲ್ಲದೇ ಕ್ರಮ ಕೈಗೊಳ್ಳಲಿ. ಆದರೆ ಸಕ್ರಮ ಇರುವ ಕ್ರಷರ್ ಗಳನ್ನು ಅಭಿವೃದ್ಧಿ ನಿಟ್ಟಿನಲ್ಲಿ ಆರಂಭಿಸಬೇಕು. ನಾನು 1983ರಲ್ಲಿಯೇ ಸಕ್ರಿಯ ರಾಜಕಾರಣಕ್ಕೆ ಬಂದವನು. ನನ್ನನ್ನು ಟಾರ್ಗೆಟ್ ಮಾಡಲು ಬಂದವರು ಮಣ್ಣಲ್ಲಿ ಮಣ್ಣಾಗಿದ್ದಾರೆ ಎಂದು ಗುಡುಗಿದರು.

ನನಗೆ ಬುದ್ಧಿ ಹೇಳಿ ಸರಿ ದಾರಿ ತೋರಿದವರೂ ಇದ್ದಾರೆ, ಕ್ಯಾತೆ ತೆಗೆದು ಕಣ್ಮರೆಯಾದವರೂ ಇದ್ದಾರೆ. ಅಕ್ರಮ ಗಣಿಗಾರಿಕೆ ಎಂದು ಹೇಳಿ ಕಳೆದ ಎರಡು ತಿಂಗಳಿಂದ ಅಭಿವೃದ್ಧಿ ಕೆಲಸಗಳೇ ಸ್ಥಗಿತಗೊಂಡಿವೆ. ಕಾನೂನು ಚೌಕಟ್ಟಿನಲ್ಲಿ ಎಲ್ಲವೂ ನಡೆಯಲಿ ಆದರೆ ಸಕ್ರಮವಾಗಿರುವ ಕ್ರಷರ್ ಕೆಲಸಗಳಿಗೆ ಅನುಮತಿ ನೀಡಲಿ ಎಂದು ಹೇಳಿದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...