alex Certify BIG NEWS: ಗೊಂದಲದಲ್ಲಿ ಪ್ರತಾಪ್ ಸಿಂಹ; ಕ್ಲಾರಿಟಿ ಪಡೆದು ಮಾತಾಡಲಿ; ತಿರುಗೇಟು ಕೊಟ್ಟ ಸುಮಲತಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಗೊಂದಲದಲ್ಲಿ ಪ್ರತಾಪ್ ಸಿಂಹ; ಕ್ಲಾರಿಟಿ ಪಡೆದು ಮಾತಾಡಲಿ; ತಿರುಗೇಟು ಕೊಟ್ಟ ಸುಮಲತಾ

ಬೆಂಗಳೂರು: ಮೈಸೂರು ಸಂಸದ ಪ್ರತಾಪ್ ಸಿಂಹ ಕೆಲವು ಗೊಂದಲದಲ್ಲಿದ್ದಾರೆ. ಅವರು ಮೈಸೂರು ಸಂಸದರಾ? ಅಥವಾ ಮಂಡ್ಯ ಸಂಸದರಾ? ಎಂಬುದನ್ನು ಮೊದಲು ಸ್ಪಷ್ಟಪಡಿಸಿಕೊಳ್ಳಬೇಕು ಎಂದು ಸಂಸದೆ ಸುಮಲತಾ ತಿಳಿಸಿದ್ದಾರೆ.

BIG NEWS: ರಾಜ್ಯಾದ್ಯಂತ ಹೋರಾಟಕ್ಕೆ ಮುಂದಾದ ಅಂಬರೀಶ್ ಅಭಿಮಾನಿಗಳು

ಸುದ್ದಿಗಾರರೊಂದಿಗೆ ಮಾತನಾಡಿದ ಸುಮಲತಾ, ಪ್ರತಾಪ್ ಸಿಂಹ ಜೆಡಿಎಸ್ ನಲ್ಲಿದ್ದಾರಾ ಅಥವಾ ಬಿಜೆಪಿಯಲ್ಲಿದ್ದಾರಾ? ಈ ಬಗ್ಗೆಯೂ ಅವರು ಕ್ಲಾರಿಟಿ ಪಡೆದುಕೊಳ್ಳಲಿ. ನಂತರ ಮಾತನಾಡಿದರೆ ಉತ್ತಮ ಎಂದು ಹೇಳಿದರು. ಕೋವಿಡ್ ನಿಂದಾಗಿ ಮೈಸೂರಿನಲ್ಲಿ ಹಲವಾರು ಸಮಸ್ಯೆಗಳು ಉಂಟಾಗಿವೆ. ಅವುಗಳನ್ನು ಸರಿಪಡಿಸುವುದು ಬಿಟ್ಟು ಗಣಿಗಾರಿಕೆ ಮಾಡುತ್ತಿರುವ ಕಂಪನಿಗಳನ್ನು ಯಾಕೆ ಸಮರ್ಥನೆ ಮಾಡಿಕೊಳ್ಳುತ್ತೀರಿ? ಕೊರೊನಾ ಸಂಕಷ್ಟದ ಸಂದರ್ಭದಲ್ಲಿ ರಾಜಕಾರಣ ಮಾಡಿ ಎಲ್ಲರೂ ಸೇರಿ ಓರ್ವ ಒಳ್ಳೆಯ ಮಹಿಳಾ ಅಧಿಕಾರಿಯನ್ನು ಅವಮಾನ ಮಾಡಿ ಅವರ ವರ್ಗಾವಣೆ ಮಾಡಿಸಿದ್ದಾರೆ. ಕೋವಿಡ್ ನಂತಹ ಸಂದರ್ಭದಲ್ಲಿ ಇದನ್ನೆಲ್ಲ ಮಾಡುವ ಅಗತ್ಯವಿತ್ತೇ? ಈ ಬಗ್ಗೆ ಮೊದಲು ಉತ್ತರ ಕೊಡಲಿ ಎಂದು ಸವಾಲು ಹಾಕಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...