alex Certify ರಾಷ್ಟ್ರಪತಿ ರಾಮನಾಥ್‌ ಕೋವಿಂದ್ ರೈಲು​ ಪ್ರಯಾಣಕ್ಕೆ ಕ್ಷಣಗಣನೆ..! ಇನ್ನು ಯಾವ್ಯಾವ ರಾಷ್ಟ್ರಪತಿಗಳು ಈ‌ ವಿಶೇಷ ರೈಲನ್ನ ಏರಿದ್ದಾರೆ ಗೊತ್ತಾ…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಾಷ್ಟ್ರಪತಿ ರಾಮನಾಥ್‌ ಕೋವಿಂದ್ ರೈಲು​ ಪ್ರಯಾಣಕ್ಕೆ ಕ್ಷಣಗಣನೆ..! ಇನ್ನು ಯಾವ್ಯಾವ ರಾಷ್ಟ್ರಪತಿಗಳು ಈ‌ ವಿಶೇಷ ರೈಲನ್ನ ಏರಿದ್ದಾರೆ ಗೊತ್ತಾ…?

ರಾಷ್ಟ್ರಪತಿಗಳ 2 ಕೋಚ್​​ ವಿಶೇಷ ರೈಲು ಬರೋಬ್ಬರಿ 15 ವರ್ಷಗಳ ಬಳಿಕ ಮತ್ತೊಮ್ಮೆ ಹಳಿಗಳ ಮೇಲೆ ಉರುಳಲು ಸಜ್ಜಾಗಿದೆ. ರಾಷ್ಟ್ರಪತಿ ರಾಮನಾಥ್​ ಕೋವಿಂದ್​​ ಈ ವಿಶೇಷ ರೈಲಿನಲ್ಲಿ ದೆಹಲಿಯ ಸಫ್ದರ್​​ಗಂಜ್​​ ನಿಲ್ದಾಣದಿಂದ ತಮ್ಮ ತವರು ಕಾನ್ಪುರಕ್ಕೆ ಜೂನ್​​ 25ರ ಇಂದು ಪ್ರಯಾಣಿಸಲಿದ್ದಾರೆ.

ರಾಷ್ಟ್ರಪತಿ ಆದ ಬಳಿಕ ರಾಮನಾಥ್​ ಕೋವಿಂದ್​ ಇದೇ ಮೊದಲ ಬಾರಿಗೆ ತವರಿಗೆ ಭೇಟಿ ನೀಡುತ್ತಿದ್ದಾರೆ. ಈ ರೈಲು ಮಾರ್ಗ ಮಧ್ಯದಲ್ಲಿ ಝಿಂಝಕ್​ ಹಾಗೂ ರುರಾದಲ್ಲಿ ನಿಲ್ಲಲಿದೆ. ಇಲ್ಲಿ ಕೋವಿಂದ್​ ತಮ್ಮ ಪರಿಚಯಸ್ಥರನ್ನ ಭೇಟಿಯಾಗಲಿದ್ದಾರೆ.

ಅಂದಹಾಗೆ ರಾಷ್ಟ್ರಪತಿ ಈ ರೀತಿ ಪ್ರೆಸಿಡೆನ್ಶಿಯಲ್​ ಸಲೂನ್​ ಏರುತ್ತಿರೋದು ಇದೇ ಮೊದಲನೇಲ್ಲ. ಈ ರಾಷ್ಟ್ರಪತಿ ಸಲೂನ್​ನ್ನು ಕೊನೆಯ ಬಾರಿಗೆ ಡಾ. ಎಪಿಜೆ ಅಬ್ದುಲ್​ ಕಲಾಂ 2004ರಲ್ಲಿ ಏರಿದ್ದರು. ಸೆಪ್ಟೆಂಬರ್​ 29 – 1952 ರಲ್ಲಿ ಡಾ. ರಾಜೇಂದ್ರ ಪ್ರಸಾದ್​ ಕೂಡ ಜಲಂಧರ್​ ಕಂಟೋನ್ಮೆಂಟ್​ ರೈಲ್ವೆ ನಿಲ್ದಾಣದಲ್ಲಿ ರೈಲನ್ನ ಏರಿದ್ದರು. ಇನ್ನು ಡಾ. ಸರ್ವಪಲ್ಲಿ​ ರಾಧಾಕೃಷ್ಣನ್​, ವಿವಿ ಗಿರಿ, ಶ್ರೀ ನೀಲಂ ಸಂಜೀವ್​ ರೆಡ್ಡಿ ಸೇರಿದಂತೆ ಹಲವರು ಈ ವಿಶೇಷ ರೈಲನ್ನ ಏರಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...