alex Certify BIG NEWS: ‘ಓಲಗದ ಸದ್ದು ಕೇಳಿ ಮದುಮಗನಾಗುವ ಆಸೆ’; ಅರವಿಂದ್ ಬೆಲ್ಲದ್ ದೆಹಲಿ ಭೇಟಿಗೆ MLC ಆಯನೂರು ವ್ಯಂಗ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ‘ಓಲಗದ ಸದ್ದು ಕೇಳಿ ಮದುಮಗನಾಗುವ ಆಸೆ’; ಅರವಿಂದ್ ಬೆಲ್ಲದ್ ದೆಹಲಿ ಭೇಟಿಗೆ MLC ಆಯನೂರು ವ್ಯಂಗ್ಯ

ಶಿವಮೊಗ್ಗ: ಪಕ್ಷದಲ್ಲಿರುವ ಕೆಲವರಿಗೆ ತಾವು ಅಧಿಕಾರಕ್ಕೆ ಬರಬೇಕು ಎಂಬ ಚಪಲ ಹಾಗಾಗಿ ಸಿಎಂ ಬದಲಾವಣೆ ಚರ್ಚೆ ಜೀವಂತವಾಗಿಡುವ ಹುನ್ನಾರ ನಡೆಸುತ್ತಿದ್ದಾರೆ. ಹಲವರು ಹಗಲುಗನಸು ಕಾಣುತ್ತಿದ್ದಾರೆ ಎಂದು ಎಂ ಎಲ್ ಸಿ ಆಯನೂರು ಮಂಜುನಾಥ್ ಹೇಳಿದ್ದಾರೆ.

ಶಾಸಕ ಅರವಿಂದ್ ಬೆಲ್ಲದ್ ದೆಹಲಿ ಭೆಟಿ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿದ ಅವರು, ಮದುವೆ ಸೀಜನ್ ನಲ್ಲಿ ಓಲಗದ ಸದ್ದು ಕೇಳಿದಾಗ ಮದುಮಗ ಆಗಬೇಕು ಅನಿಸುತ್ತೆ. ಹಾಗೇ ಅರವಿಂದ್ ಬೆಲ್ಲದ್ ಎಂಬ ಮನುಷ್ಯ ಸಿಎಂ ಕನಸು ಕಾಣುತ್ತಿದ್ದಾರೆ. ಕನಸು ಕಾಣೋರಿಗೆ ಬೇಡ ಎನ್ನಲು ಆಗಲ್ಲ ಎಂದು ವ್ಯಂಗ್ಯವಾಡಿದ್ದಾರೆ.

40 ಸಾವಿರ ಕೋಟಿ ಸಾಲದ ನಡುವೆಯೂ 11 ಕೋಟಿ ಮೌಲ್ಯದ ಐಷಾರಾಮಿ ಕಾರು ಖರೀದಿ….!

ತಾನೇ ಗೆದ್ದು ಬರಬೇಕಾದರೆ ತಿಣುಕಾಡುವಂತಹ ಮನುಷ್ಯ ಬೆಲ್ಲದ್. ಹೀಗಿರುವಾಗ ಸಿಎಂ ಕನಸು ಕಾಣುತ್ತಿರುವಾಗ ಏನು ಹೇಳಲಾಗುತ್ತೆ. ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ರಾಜ್ಯಕ್ಕೆ ಭೇಟಿ ನೀಡಿ ಎಲ್ಲಾ ಗೊಂದಲಗಳಿಗೂ ತೆರೆ ಎಳೆಯಲಿದ್ದಾರೆ ಎಂದು ಹೇಳಿದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...