alex Certify ಗ್ರಾಮೀಣ ಪ್ರದೇಶದ ಬಡ ಸೋಂಕಿತರಿಗೆ ವೈದ್ಯ ದಂಪತಿಯಿಂದ ವಿಶಿಷ್ಟ ಸೇವೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗ್ರಾಮೀಣ ಪ್ರದೇಶದ ಬಡ ಸೋಂಕಿತರಿಗೆ ವೈದ್ಯ ದಂಪತಿಯಿಂದ ವಿಶಿಷ್ಟ ಸೇವೆ

ಸಂಪೂರ್ಣ ದೇಶವೇ ಕೊರೊನಾ ವಿರುದ್ಧದ ಹೋರಾಟದಲ್ಲಿದೆ. ಸರ್ಕಾರಗಳು ಸೋಂಕನ್ನ ನಿಯಂತ್ರಿಸಲು ಪ್ರಯತ್ನ ಪಡ್ತಿರೋದ್ರ ಬೆನ್ನಲ್ಲೇ ಕೆಲ ಮಹಾನುಭಾವರು ಅನೇಕ ರೀತಿಯಲ್ಲಿ ಸಹಾಯಹಸ್ತ ಚಾಚುತ್ತಿದ್ದಾರೆ. ಕೆಲವರು ಹಣದ ರೂಪದಲ್ಲಿ ಸಹಾಯ ಮಾಡ್ತಿದ್ರೆ ಇನ್ನೂ ಕೆಲವರು ಆಹಾರ ಹಾಗೂ ಔಷಧಿಗಳ ರೂಪದಲ್ಲಿ ನೆರವಿನ ಮಹಾಪೂರವನ್ನೇ ನೀಡುತ್ತಿದ್ದಾರೆ.

ಇದೇ ರೀತಿ ಕೋವಿಡ್​ ರೋಗಿಗಳ ಸಹಾಯಕ್ಕೆ ಕೈ ಚಾಚಿರುವ ಮುಂಬೈನ ದಂಪತಿ ವಿಶೇಷ ರೂಪದಲ್ಲಿ ಸಮಾಜಕ್ಕೆ ತಮ್ಮ ಸೇವೆಯನ್ನ ಸಲ್ಲಿಸುತ್ತಿದ್ದಾರೆ. ಕೊರೊನಾದಿಂದ ಗುಣಮುಖರಾದವರಿಂದ ಉಳಿದ ಔಷಧಿಗಳನ್ನ ಸಂಗ್ರಹಿಸಿ ಇದನ್ನ ಯಾರಿಗೆ ಅವಶ್ಯಕತೆ ಇದೆಯೋ ಅಂತವರಿಗೆ ತಲುಪಿಸುವ ಕಾರ್ಯ ಮಾಡ್ತಿದ್ದಾರೆ.

ವಿಶ್ವದ ಎಲ್ಲ ನಾಣ್ಯಗಳು ದುಂಡಾಗಿರಲು ಕಾರಣವೇನು…..? ಇಲ್ಲಿದೆ ಇಂಟ್ರೆಸ್ಟಿಂಗ್ ಮಾಹಿತಿ

ಡಾ. ಮಾರ್ಕಸ್​ ರ್ಯಾನಿ ಹಾಗೂ ಅವರ ಪತ್ನಿ ಡಾ. ರಾನ್ನೆ ಈ ರೀತಿ ಕೊರೊನಾದಿಂದ ಗುಣಮುಖರಾದ ರೋಗಿಗಳಿಂದ ಔಷಧಿಗಳನ್ನ ಸಂಗ್ರಹಿಸಿ ಅವುಗಳನ್ನ ಗ್ರಾಮೀಣ ಪ್ರದೇಶದ ಆರೋಗ್ಯ ಕೇಂದ್ರಗಳಿಗೆ ದಾನ ಮಾಡುತ್ತಿದ್ದಾರೆ. ಈ ವಿಚಾರವಾಗಿ ಮಾತನಾಡಿದ ವೈದ್ಯೆ ರಾನ್ನೆ, 10 ದಿನದ ಹಿಂದೆ ನಾವು ಈ ಕಾರ್ಯಕ್ರಮವನ್ನ ಆರಂಭಿಸಿದ್ದೇವೆ. ನಾವು ಈ ರೀತಿ ಔಷಧಿಗಳನ್ನ ಸಂಗ್ರಹಿಸಿ ಅವುಗಳನ್ನ ಬಡ ಸೋಂಕಿತರಿಗೆ ನೀಡುವ ವ್ಯವಸ್ಥೆ ಮಾಡುತ್ತಿದ್ದೇವೆ ಎಂದು ಹೇಳಿದ್ರು.

ನೆರೆಹೊರೆಯ 7-8 ಮಂದಿಯ ಸಹಾಯದಿಂದ ಈ ದಂಪತಿ ಅತ್ಯಂತ ಕಡಿಮೆ ಅವಧಿಯಲ್ಲಿ 20 ಕೆಜಿಗೂ ಅಧಿಕ ಔಷಧಿಗಳನ್ನ ಸಂಗ್ರಹಿಸಿದೆ. ಎನ್​ಜಿಒ ಜೊತೆ ಕೈ ಜೋಡಿಸಿರುವ ದಂಪತಿ ಈ ಎಲ್ಲಾ ಔಷಧಿಗಳನ್ನ ಗ್ರಾಮೀಣ ಪ್ರದೇಶಕ್ಕೆ ತಲುಪಿಸುವ ಕಾರ್ಯ ಮಾಡಿವೆ. ವೈದ್ಯ ದಂಪತಿಯ ಈ ವಿಶೇಷ ಐಡಿಯಾ ಭಾರೀ ಮೆಚ್ಚುಗೆಗೆ ಪಾತ್ರವಾಗ್ತಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...