alex Certify ಇತ್ತೀಚೆಗೆ ಹೆಚ್ಚು ವಿವಾದಕ್ಕೆ ಒಳಗಾದ ರಾಜಕಾರಣಿ ಯಾರು ಗೊತ್ತಾ…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇತ್ತೀಚೆಗೆ ಹೆಚ್ಚು ವಿವಾದಕ್ಕೆ ಒಳಗಾದ ರಾಜಕಾರಣಿ ಯಾರು ಗೊತ್ತಾ…?

ಮೈಸೂರು: ನಾನು ಏನೇ ಹೇಳಿದರೂ ಆರ್.ಎಸ್.ಎಸ್. ನವರು ಅದನ್ನು ವಿವಾದವನ್ನಾಗಿ ಮಾಡುತ್ತಾರೆ. ನನ್ನ ಇಮೇಜ್ ಹಾಳು ಮಾಡುವುದೇ ಅವರ ಉದ್ದೇಶ ಎಂದು ಮಾಜಿ ಸಿಎಂ, ವಿಪಕ್ಷ ನಾಯಕ ಸಿದ್ದರಾಮಯ್ಯ ಆರ್.ಎಸ್.ಎಸ್. ವಿರುದ್ಧ ಹರಿಹಾಯ್ದಿದ್ದಾರೆ.

ಮೈಸೂರಿನಲ್ಲಿ ಮಾತನಾಡಿದ ಸಿದ್ದರಾಮಯ್ಯ, ನನ್ನ ಹೇಳಿಕೆಗೆ ಆರ್.ಎಸ್.ಎಸ್. ನವರು ರಂಗು ರಂಗಿನ ಬಣ್ಣ ಕಟ್ಟುತ್ತಾರೆ. ನಾನು ಹಳ್ಳಿ ಭಾಷೆಯಲ್ಲಿ ಮಾತನಾಡುತ್ತೇನೆ. ಅದು ವಿವಾದವಾಗುತ್ತದೆ. ನಾನು ನೇರವಾಗಿ ಮಾತನಾಡುವವನು. ಸಾಧ್ಯವಾದಷ್ಟು ಸತ್ಯ ಹೇಳುತ್ತೇನೆ. ಅದನ್ನು ಅವರು ವಿವಾದ ಮಾಡುತ್ತಾರೆ. ಇತ್ತೀಚಿನ ದಿನಗಳಲ್ಲಿ ಅತಿ ಹೆಚ್ಚು ವಿವಾದಕ್ಕೀಡಾಗಿರುವ ರಾಜಕಾರಣಿ ಎಂದರೆ ಅದು ನಾನು ಎಂದರು.

ಹನುಮ ಹುಟ್ಟಿದ ದಿನದ ಬಗ್ಗೆ ಕೇಳಿದ್ದೆ. ಅದು ವಿವಾದವಾಯ್ತು. ಗೋಮಾಂಸ ಸೇವನೆ ಅವರ ಆಹಾರದ ಹಕ್ಕು ಎಂದೇ, ಸಮಾಜ ಒಡೆಯುವ ಕೆಲಸ ಮಾಡಬೇಡಿ ಎಂದು ಹೇಳಿದೆ. ಆರ್.ಎಸ್.ಎಸ್. ನವರು ಅದನ್ನೂ ವಿವಾದ ಮಾಡಿದರು. ಹೀಗೆ ನಾನು ಏನೇ ಹೇಳಿದರೂ ವಿವಾದ ಮಾಡುತ್ತಿದ್ದಾರೆ. ರಾಜಕಾರಣದಲ್ಲಿ ಹೆಚ್ಚು ವಿವಾದಕ್ಕೀಡಾದವನು ನಾನೇ ಎಂದು ಹೇಳಿದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...