ಕೊರೊನಾ ಬಂದ ಹೋದ ಬಳಿಕ ದೇಹ ನಿಶ್ಯಕ್ತಿಯಿಂದ ಬಳಲುವುದು ಸಹಜ. ಆಗ ರೋಗಿಯ ದೇಹಕ್ಕೆ ವಿಟಮಿನ್ ಡಿ ಅಗತ್ಯವಾಗಿ ಸಿಗುವಂತೆ ಮಾಡಬೇಕು. ಹಾಗಾದಾಗ ಮಾತ್ರ ವ್ಯಕ್ತಿ ಚೇತರಿಸಿಕೊಳ್ಳಲು ಸಾಧ್ಯ.
ಬೆಳಿಗ್ಗೆ ಎಂಟರೊಳಗಿನ ಹಾಗೂ ಸಂಜೆ ಐದರ ಬಳಿಕದ ಬಿಸಿಲು ನಿಮ್ಮ ದೇಹಕ್ಕೆ ಬೀಳುವಂತೆ ಮಾಡಿಕೊಳ್ಳಿ. ಇದು ನಾವು ಸೇವಿಸಿದ ಆಹಾರದಲ್ಲಿರುವ ಕ್ಯಾಲ್ಸಿಯಂ ಅನ್ನು ದೇಹ ಹೀರಿಕೊಳ್ಳುವಂತೆ ಮಾಡುತ್ತದೆ.
ಕೊರೊನಾ ಬಂದು ಗುಣಮುಖರಾದವರಿಗೆ ನಿತ್ಯ ಸೇವಿಸಲು ಮೀನು ಕೊಡಿ. ಇದರಲ್ಲಿ ವಿಟಮಿನ್ ಡಿ ಹೇರಳವಾಗಿರುತ್ತದೆ. ಮೊಟ್ಟೆಯ ಹಳದಿ ಭಾಗ, ಅಣಬೆ, ಡೈರಿ ಉತ್ಪನ್ನಗಳಾದ ಹಾಲು, ಮೊಸರು, ಚೀಸ್ ಸೇವಿಸಲು ಕೊಡಿ.
ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಹಾಲಿಗೆ ಚಿಟಿಕೆ ಅರಿಶಿನ ಪುಡಿ ಹಾಕಿ ಕುಡಿಸಿ. ಸಾಧ್ಯವಾದಷ್ಟು ಧೂಮಪಾನ, ಮದ್ಯಪಾನಗಳಿಂದ ದೂರವಿರಿ. ತರಕಾರಿ, ಹಣ್ಣು, ಸೊಪ್ಪುಗಳನ್ನು ಹೆಚ್ಚು ಸೇವಿಸುವುದರಿಂದ ಆರೋಗ್ಯವೂ ವೃದ್ಧಿ. ರೋಗ ನಿರೋಧಕ ಶಕ್ತಿಯೂ ಹೆಚ್ಚುತ್ತದೆ.