alex Certify ಕಾಂಗ್ರೆಸ್‌ ಕ್ಷಮೆ ಕೋರುವಂತೆ ಕೇಂದ್ರ ಸಚಿವರ ಆಗ್ರಹ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಾಂಗ್ರೆಸ್‌ ಕ್ಷಮೆ ಕೋರುವಂತೆ ಕೇಂದ್ರ ಸಚಿವರ ಆಗ್ರಹ

ಪಾಕಿಸ್ತಾನ ಸಚಿವ ಪುಲ್ವಾಮಾ ದಾಳಿ ನಮ್ಮ ಸರ್ಕಾರದ ಸಾಧನೆ ಎಂಬ ಹೇಳಿಕೆ ನೀಡಿದ ಬೆನ್ನಲ್ಲೇ ಕೇಂದ್ರ ಸಚಿವ ಪ್ರಕಾಶ್​ ಜಾವಡೇಕರ್​ ಕಾಂಗ್ರೆಸ್​ ಪಕ್ಷವನ್ನ ತರಾಟೆಗೆ ತೆಗೆದುಕೊಂಡಿದ್ದಾರೆ. ಪುಲ್ವಾಮಾ ದಾಳಿ ವಿಚಾರದಲ್ಲಿ ಬಿಜೆಪಿ ವಿರುದ್ಧ ಇಲ್ಲಸಲ್ಲದ ಆರೋಪ ಮಾಡಿದ ಕಾಂಗ್ರೆಸ್​ ಕ್ಷಮೆ ಯಾಚಿಸಬೇಕು ಅಂತಾ ಆಗ್ರಹಿಸಿದ್ದಾರೆ.

ಫೆಬ್ರವರಿ ತಿಂಗಳಲ್ಲಿ ಪುಲ್ವಾಮಾ ದಾಳಿ ನಡೆದು 1 ವರ್ಷದ ನೆನಪಿನಲ್ಲಿ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಬಿಜೆಪಿಯನ್ನು ಟಾರ್ಗೆಟ್​ ಮಾಡಿದ್ದರು. ಕೇಂದ್ರ ಸರ್ಕಾರ ಭದ್ರತಾ ಕೊರತೆ ಹಿನ್ನೆಲೆ ಈ ದಾಳಿ ನಡೆದಿದೆ. ಹೀಗಾಗಿ ಈ ದಾಳಿಯ ಹೊಣೆ ಯಾರು ಹೊರಬೇಕು ಅಂತಾ ಪರೋಕ್ಷವಾಗಿ ಬಿಜೆಪಿಗೆ ಟಾಂಗ್​ ನೀಡಿದ್ದರು.

ರಾಹುಲ್​ ಗಾಂಧಿ ಜೊತೆಯಲ್ಲಿ ಬಿ.ಕೆ. ಹರಿಪ್ರಸಾದ್​, ಕರ್ನಾಟಕದ ಕೆಲ ಕಾಂಗ್ರೆಸ್​ ನಾಯಕರು ಬಿಜೆಪಿ ವಿರುದ್ಧ ಹರಿಹಾಯ್ದಿದ್ದರು. ಪ್ರಧಾನಿ ಮೋದಿ ಪಾಕಿಸ್ತಾನದ ಜೊತೆ ಮ್ಯಾಚ್​ ಫಿಕ್ಸಿಂಗ್​ ಮಾಡಿಕೊಂಡಿದ್ದಾರೆ ಅಂತಲೂ ಆರೋಪ ಮಾಡಲಾಗಿತ್ತು.

ಆದರೆ ಇದೀಗ ಪಾಕ್​ ಸಚಿವ ಫವಾದ್​ ಚೌಧರಿ ಪುಲ್ವಾಮಾ ದಾಳಿಯ ಹೊಣೆಯನ್ನ ಹೊತ್ತುಕೊಂಡಿದ್ದಾರೆ. ಈ ಸಂಬಂಧ ಟ್ವೀಟ್​ ಮಾಡಿರುವ ಪ್ರಕಾಶ್​ ಜಾವ್ಡೇಕರ್​, ಪಾಕಿಸ್ತಾನವೇ ಇದೀಗ ದಾಳಿಯ ಹೊಣೆಯನ್ನ ಹೊತ್ತುಕೊಂಡಿದೆ. ಸರಿಯಾದ ಮಾಹಿತಿಯಿಲ್ಲದೇ ಬಿಜೆಪಿ ವಿರುದ್ಧ ಇಲ್ಲಸಲ್ಲದ ಮಾತನಾಡಿದ ಕಾಂಗ್ರೆಸ್​ ಕ್ಷಮೆಯಾಚಿಸುವಂತೆ ಟ್ವೀಟ್​ ಮೂಲಕ ಆಗ್ರಹಿಸಿದ್ದಾರೆ

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...