alex Certify 9 ಜನರನ್ನು ಬಾವಿಗೆ ಎಸೆದು ಹತ್ಯೆಗೈದಿದ್ದ ಪಾಪಿಗೆ ಗಲ್ಲು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

9 ಜನರನ್ನು ಬಾವಿಗೆ ಎಸೆದು ಹತ್ಯೆಗೈದಿದ್ದ ಪಾಪಿಗೆ ಗಲ್ಲು

ತೆಲಂಗಾಣ: 9 ಜನರನ್ನು ಬಾವಿಗೆ ಎಸೆದು ಕೊಂದಿದ್ದ ಅಪರಾಧಿಗೆ ವಾರಂಗಲ್ ಜಿಲ್ಲಾ ಸೆಷನ್ಸ್ ನ್ಯಾಯಾಲಯ ಗಲ್ಲು ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಅಪರಾಧಿ ಸಂಜಯ್ ಕುಮಾರ್ ಯಾದವ್ ಗೆ ಇದೀಗ ಕೋರ್ಟ್ ಗಲ್ಲು ಶಿಕ್ಷೆ ವಿಧಿಸಿದೆ. ತೆಲಂಗಾಣದ ವಾರಂಗಲ್ ಬಳಿಯ ಗೊರಕುಂಟ ಗ್ರಾಮದಲ್ಲಿ ಸಂಜಯ್ ಕುಮಾರ್ ಯಾದವ್ ಒಂದೇ ಕುಟುಂಬದ 9 ಮಂದಿಯನ್ನು ಬಾವಿಗೆ ಎಸೆದು ಹತ್ಯೆ ಮಾಡಿದ್ದ.

ಅಪರಾಧಿ ಸಂಜಯ್, ಊಟದಲ್ಲಿ ನಿದ್ರೆ ಮಾತ್ರೆ ಹಾಕಿ ಕೊಟ್ಟಿದ್ದ. ರಾತ್ರಿ ಊಟ ಮಾಡಿ ನಿದ್ದೆ ಮಾಡಿದ್ದ ಕುಟುಂಬ ಸದಸ್ಯರನ್ನು ಒಬ್ಬೊಬ್ಬರನ್ನಾಗಿ ಮನೆಯಿಂದ ಆಚೆ ಎಳೆದುತಂದು ಬಾವಿಗೆ ಹಾಕಿದ್ದ.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...