alex Certify ಬಯಲಾಯ್ತು ಪ್ರೀತಿಸಿದ ಯುವತಿ ಕೊಲೆ ರಹಸ್ಯ: ಪ್ರಿಯಕರನಲ್ಲ, ತಂದೆಯಿಂದಲೇ ದುಷ್ಕೃತ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಯಲಾಯ್ತು ಪ್ರೀತಿಸಿದ ಯುವತಿ ಕೊಲೆ ರಹಸ್ಯ: ಪ್ರಿಯಕರನಲ್ಲ, ತಂದೆಯಿಂದಲೇ ದುಷ್ಕೃತ್ಯ

ರಾಮನಗರ: ರಾಮನಗರ ಜಿಲ್ಲೆ ಬೆಟ್ಟಹಳ್ಳಿಯಲ್ಲಿ ಯುವತಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆಕೆಯ ತಂದೆ ಕೃಷ್ಣಪ್ಪ, ದೊಡ್ಡಪ್ಪನ ಮಗ ಯೋಗೇಶ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.

ಮತ್ತೊಬ್ಬ ಬಾಲಾಪರಾಧಿಯನ್ನು ವಶಕ್ಕೆ ಪಡೆಯಲಾಗಿದೆ. ರಾಮನಗರ ಜಿಲ್ಲೆ ಮಾಗಡಿ ತಾಲ್ಲೂಕಿನ ಬೆಟ್ಟಹಳ್ಳಿಯಲ್ಲಿ ಅಕ್ಟೋಬರ್ 8 ರಂದು ಅನ್ಯಜಾತಿಯ ಯುವಕನನ್ನು ಪ್ರೀತಿಸುತ್ತಿದ್ದ ಯುವತಿ ಕೊಲೆ ಮಾಡಲಾಗಿತ್ತು.

ಮಗಳನ್ನು ಕೊಲೆ ಮಾಡಿದ ತಂದೆ ಕೃಷ್ಣಪ್ಪ ಅಕ್ಟೋಬರ್ 9 ರಂದು ಕುದೂರು ಠಾಣೆಗೆ ದೂರು ನೀಡಿದ್ದ. ಅಕ್ಟೋಬರ್ 10 ರಂದು ಮಾವಿನ ತೋಟದಲ್ಲಿ ಮೃತದೇಹ ಪತ್ತೆಯಾಗಿತ್ತು. ಯುವತಿಯನ್ನು ಕೊಲೆ ಮಾಡಿರುವ ಬಗ್ಗೆ ಪ್ರಿಯತಮನ ಮೇಲೆ ಆರೋಪ ಹೊರಿಸಲಾಗಿತ್ತು. ತನಿಖೆ ನಡೆಸಿದ ಕುದೂರು ಠಾಣೆ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ಹೇಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...