alex Certify ಶಾಕಿಂಗ್: ದಲಿತ ವೃದ್ಧನಿಗೆ ಮೂತ್ರ ಕುಡಿಸಿದ ದುಷ್ಕರ್ಮಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶಾಕಿಂಗ್: ದಲಿತ ವೃದ್ಧನಿಗೆ ಮೂತ್ರ ಕುಡಿಸಿದ ದುಷ್ಕರ್ಮಿ

ಉತ್ತರ ಪ್ರದೇಶದ ಹತ್ರಾಸ್​​ನಲ್ಲಿ ದಲಿತ ಯುವತಿಯ ಸಾಮೂಹಿಕ ಅತ್ಯಾಚಾರ ಹಾಗೂ ಕೊಲೆ ಪ್ರಕರಣ ಇನ್ನೂ ಜೀವಂತವಾಗಿರೋ ಬೆನ್ನಲ್ಲೇ ಇದೀಗ ದಲಿತ ವೃದ್ಧನಿಗೆ ಮೂತ್ರ ಕುಡಿಸಿದ ಅಮಾನವೀಯ ಘಟನೆ ಬೆಳಕಿಗೆ ಬಂದಿದೆ. ಉತ್ತರ ಪ್ರದೇಶದ ರೋಡಾ ಹಳ್ಳಿಯ 65 ವರ್ಷದ ವೃದ್ಧನಿಗೆ ದುಷ್ಕರ್ಮಿ ಒತ್ತಾಯಪೂರ್ವಕವಾಗಿ ಮೂತ್ರ ಕುಡಿಸಿ ವಿಕೃತಿ ಮೆರೆದಿದ್ದಾನೆ.

ದಲಿತ ವೃದ್ಧನ ಪುತ್ರನ ಮೇಲೆ ಸೋನು ಯಾದವ್​ ಎಂಬಾತ ಕೆಲ ದಿನಗಳ ಹಿಂದೆ ಕೊಡಲಿಯಿಂದ ಹಲ್ಲೆ ನಡೆಸಿದ್ದ. ಈ ಸಂಬಂಧ ವೃದ್ಧ ತನ್ನ ಪುತ್ರನ ಜೊತೆ ಪೊಲೀಸ್​ ಠಾಣೆ ಮೆಟ್ಟಿಲೇರಿದ್ದ. ಇದಾದ ಬಳಿಕ ಪೊಲೀಸ್ ಕಂಪ್ಲೇಂಟ್​ ಹಿಂಪಡೆಯುವಂತೆ ಸೋನು ಯಾದವ್​ ಒತ್ತಡ ಹೇರಿದ್ದ ಎನ್ನಲಾಗಿದೆ. ಆದರೆ ಸೋನು ಯಾದವ್​ ಮಾತನ್ನ ಕೇಳದ ಕಾರಣಕ್ಕೆ ಈ ರೀತಿ ಮಾಡಿದ್ದಾನೆ ಅಂತಾ ಸಂತ್ರಸ್ತ ವೃದ್ಧ ಹೇಳಿದ್ದಾರೆ.

ಸದ್ಯ ಪ್ರಕರಣ ಸಂಬಂಧ ಲಲಿತ್​ಪುರ ಠಾಣೆಯಲ್ಲಿ ಸೋನು ಯಾದವ್​ ವಿರುದ್ಧ ಪ್ರಕರಣ ದಾಖಲಾಗಿದೆ. ಇನ್ನು ಈ ವಿಚಾರವಾಗಿ ಮಾತನಾಡಿದ ಲಲಿತ್​ಪುರ ಎಸ್ಪಿ ಮಿರ್ಜಾ ಮಾಂಝರ್​​ ವಿಚಾರ ಬೆಳಕಿಗೆ ಬರ್ತಿದ್ದಂತೆ ದೂರು ದಾಖಲಿಸಿಕೊಂಡಿದ್ದೇವೆ. ಪ್ರಮುಖ ಆರೋಪಿಯನ್ನ ಬಂಧಿಸಲಾಗಿದ್ದು ಇನ್ನೊಬ್ಬ ಆರೋಪಿಗಾಗಿ ತಲಾಶ್ ಮುಂದುವರಿದಿದೆ ಅಂತಂದ್ರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...