alex Certify BIG BREAKING: ಶುಕ್ರವಾರದ ʼಕರ್ನಾಟಕ ಬಂದ್ʼ‌ ನಿರ್ಧಾರದಿಂದ ಹಿಂದೆ ಸರಿದ ರೈತ ಸಂಘ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG BREAKING: ಶುಕ್ರವಾರದ ʼಕರ್ನಾಟಕ ಬಂದ್ʼ‌ ನಿರ್ಧಾರದಿಂದ ಹಿಂದೆ ಸರಿದ ರೈತ ಸಂಘ

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ರೈತ ವಿರೋಧಿ ನೀತಿ ವಿರೋಧಿಸಿ ಸೆಪ್ಟೆಂಬರ್‌ 25 ರ ಶುಕ್ರವಾರದಂದು ʼಕರ್ನಾಟಕ ಬಂದ್ʼ‌ ಗೆ ಕರೆ ನೀಡಲಾಗುತ್ತದೆ ಎಂದು ಹೇಳಲಾಗಿದ್ದು, ಈ ಕುರಿತು ಮಾಧ್ಯಮಗಳಲ್ಲೂ ವರದಿಯಾಗಿತ್ತು.

ಆದರೆ ಇದೀಗ ʼಕರ್ನಾಟಕ ಬಂದ್ʼ‌ ಕುರಿತು ಕುರಬೂರು ಶಾಂತಕುಮಾರ್‌ ಸ್ಪಷ್ಟನೆ ನೀಡಿದ್ದು, ಶುಕ್ರವಾರದ ಕರ್ನಾಟಕ ಬಂದ್‌ ಇರುವುದಿಲ್ಲವೆಂದು ತಿಳಿಸಿದ್ದಾರೆ. ಅಂದು ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿಗಳನ್ನು ತಡೆದು ಜೈಲ್‌ ಭರೋ ಚಳವಳಿ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.

ಕೊರೊನಾ ಲಾಕ್‌ ಡೌನ್‌ ನಿಂದಾಗಿ ಈಗಾಗಲೇ ಜನತೆ ಸಾಕಷ್ಟು ಆರ್ಥಿಕ ತೊಂದರೆಯನ್ನು ಅನುಭವಿಸಿದ್ದಾರೆ. ನಮ್ಮ ಚಳವಳಿಗೆ ಬಹುತೇಕ ಸಂಘಟನೆಗಳು ಬೆಂಬಲ ಸೂಚಿಸಿವೆ. ಆದರೆ ಜನತೆಗೆ ಅನಾನುಕೂಲವಾಗಬಾರದೆಂಬ ಕಾರಣಕ್ಕೆ ಅಂದು ಬಂದ್‌ ಮಾಡದೆ ಪ್ರತಿಭಟನೆಗಳ ಮೂಲಕ ಸರ್ಕಾರಗಳಿಗೆ ಬಿಸಿ ಮುಟ್ಟಿಸಲಾಗುತ್ತದೆ ಎಂದು ಕುರಬೂರು ಶಾಂತಕುಮಾರ್‌ ಹೇಳಿದ್ದಾರೆ.

ರಾಜ್ಯ ರೈತ ಸಂಘ ಕರೆ ನೀಡುತ್ತದೆ ಎಂದು ಹೇಳಲಾಗಿದ್ದ, ಶುಕ್ರವಾರದ ʼಕರ್ನಾಟಕ ಬಂದ್ʼ‌ ಗೆ ಬಹುತೇಕ ಸಂಘಟನೆಗಳು ಬೆಂಬಲ ನೀಡಿದ್ದವು. ಅನ್ನದಾತರ ಹೋರಾಟಕ್ಕೆ ನಮ್ಮ ಬೆಂಬಲವಿದೆ ಎಂದು ತಿಳಿಸಿದ್ದವು. ಆದರೆ ಯಾರಿಗೂ ತೊಂದರೆಯಾಗಬಾರದೆಂಬ ಉದ್ದೇಶದಿಂದ ಶುಕ್ರವಾರದಂದು ʼಕರ್ನಾಟಕ ಬಂದ್ʼ‌ ಮಾಡದೆ ಅಂದು ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿ ತಡೆದು ಜೈಲ್‌ ಭರೋ ಚಳವಳಿ ಮಾಡಲು ರೈತ ಮುಖಂಡರು ತೀರ್ಮಾನಿಸಿದ್ದಾರೆನ್ನಲಾಗಿದೆ.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...