alex Certify ನಟಿ ರಾಗಿಣಿಗೆ ಉಪಹಾರ ತಂದ ಪೋಷಕರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಟಿ ರಾಗಿಣಿಗೆ ಉಪಹಾರ ತಂದ ಪೋಷಕರು

ಬೆಂಗಳೂರು: ಸ್ಯಾಂಡಲ್ ವುಡ್ ಗೆ ಡ್ರಗ್ಸ್ ಮಾಫಿಯಾ ನಂಟು ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿಯಿಂದ ಬಂಧನಕ್ಕೊಳಗಾಗಿರುವ ನಟಿ ರಾಗಿಣಿ ಮಹಿಳಾ ಸಾಂತ್ವನ ಕೇಂದ್ರದಲ್ಲಿದ್ದು, ಸಿಸಿಬಿ ಕಚೇರಿಗೆ ತೆರಳುವ ಸಿದ್ಧತೆ ನಡೆಸಿದ್ದಾರೆ.

ಬೆಂಗಳೂರಿನ ಮಡಿವಾಳದಲ್ಲಿರುವ ಮಹಿಳಾ ಸಾಂತ್ವನ ಕೇಂದ್ರಕ್ಕೆ ಆಗಮಿಸಿರುವ ರಾಗಿಣಿ ಪೋಷಕರು, ಮಗಳನ್ನು ನೋಡಲು ಮುಂದಾಗಿದ್ದಾರೆ. ಅಲ್ಲದೇ ರಾಗಿಣಿಗಾಗಿ ಬೆಳಗ್ಗಿನ ಉಪಹಾರ ತಂದು ಕೊಟ್ಟಿದ್ದಾರೆ. ಇನ್ನು ಮಗಳಿಗೆ ಬಟ್ಟೆಯನ್ನು ತಂದಿರುವ ಪೋಷಕರು, ಧೈರ್ಯದಿಂದ ಇರುವಂತೆ ಸಾಂತ್ವನ ಹೇಳಿದ್ದಾರೆ.

ಇನ್ನು ಕೆಲವೇ ಹೊತ್ತಲ್ಲಿ ರಾಗಿಣಿ ಮತ್ತೆ ಸಿಸಿಬಿ ಕಚೇರಿಗೆ ತೆರಳಿ ವಿಚಾರಣೆಗೆ ಒಳಗಾಗಲಿದ್ದಾರೆ. ಡ್ರಗ್ಸ್ ಮಾಫಿಯಾ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ರಾಗಿಣಿ ಆಪ್ತ ರವಿಶಂಕರ್ ನೀಡಿರುವ ಹೇಳಿಕೆ ಹಾಗೂ ಮತ್ತೋರ್ವ ಆರೋಪಿ ವೀರೇನ್ ಖನ್ನಾ ನೀಡಿರುವ ಹೇಳಿಕೆಗಳು ಸ್ಯಾಂಡಲ್ ವುಡ್ ನಟಿಯ ಸಂಕಷ್ಟಕ್ಕೆ ಕಾರಣವಾಗಿದೆ ಎನ್ನಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...