alex Certify ಮಾಧ್ಯಮಗಳ ವಿರುದ್ಧ ಹರಿಹಾಯ್ದ ಸುಶಾಂತ್ ಕುಟುಂಬ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಾಧ್ಯಮಗಳ ವಿರುದ್ಧ ಹರಿಹಾಯ್ದ ಸುಶಾಂತ್ ಕುಟುಂಬ..!

ಸುಶಾಂತ್ ಸಿಂಗ್ ಆತ್ಮಹತ್ಯೆ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಶಾಂತ್ ಆತ್ಮೀಯರನ್ನು ಸಿಬಿಐ ವಿಚಾರಣೆಗೆ ಒಳಪಡಿಸಿದೆ. ಸುಶಾಂತ್ ಆತ್ಮಹತ್ಯೆ ಮಾಡಿಕೊಂಡಿಲ್ಲ ಇದೊಂದು ಕೊಲೆ ಎನ್ನುತ್ತಿದ್ದಾರೆ ಸುಶಾಂತ್ ಕುಟುಂಬ ಹಾಗೂ ಅವರ ಅಭಿಮಾನಿಗಳು. ಈ ಪ್ರಕರಣದ ವಿಚಾರಣೆ ಮುಂದುವರೆದಿದೆ. ಈ ಬೆನ್ನಲ್ಲೇ ಸುಶಾಂತ್ ಕುಟುಂಬ ಎಚ್ಚರಿಕೆ ನೀಡಿದ್ದಾರೆ.

ಹೌದು, ಸುಶಾಂತ್ ಜೀವ ವಿಮೆಯನ್ನು ಮಾಡಿಸಿದ್ದರು. ಆತ್ಮಹತ್ಯೆ ಎಂದರೆ ಸುಶಾಂತ್ ಕುಟುಂಬಕ್ಕೆ ವಿಮಾ ಹಣ ಹೋಗುವುದಿಲ್ಲ. ಹಾಗಾಗಿ ಇದನ್ನು ಕೊಲೆ ಅಥವಾ ಆತ್ಮಹತ್ಯೆಗೆ ಪ್ರೇರೇಪಿಸಲಾಗಿತ್ತು ಎಂಬಂತೆ ಸೃಷ್ಟಿಸಲಾಗುತ್ತಿದೆ ಎಂದು ಕೆಲ ಮಾಧ್ಯಮಗಳಲ್ಲಿ ವರದಿ ಮಾಡಲಾಗಿತ್ತಂತೆ. ಈ ಆರೋಪಕ್ಕೆ ಸಿಡಿದೆದ್ದಿರುವ ಈ ನಟನ ಕುಟುಂಬ ಸುಶಾಂತ್ ಜೀವ ವಿಮೆಯನ್ನೇ ಮಾಡಿಸಿಲ್ಲ ಎಂದು ಸ್ಪಷ್ಟನೆ ಕೊಟ್ಟಿದೆ.

ಈ ವಿಚಾರವಾಗಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿರುವ ಸುಶಾಂತ್ ತಂದೆಯ ಪರ ವಕೀಲ ವಿಕಾಸ್ ಸಿಂಗ್, ಇದೊಂದು ಸುಳ್ಳು ಸುದ್ದಿ. ಮಾಧ್ಯಮಗಳು ಸುಳ್ಳನ್ನು ಬಿತ್ತರಿಸುತ್ತಿವೆ. ಸುಶಾಂತ್ ಯಾವುದೇ ಜೀವ ಮಿಮೆ ಮಾಡಿಸಿಲ್ಲ. ಅಲ್ಲದೆ ಈ ರೀತಿ ಸುಳ್ಳು ಸುದ್ದಿ ಮಾಡುವುದು ಮುಂದುವರೆದರೆ ಕಾನೂನು ಕ್ರಮಕ್ಕೆ ಮುಂದಾಗುತ್ತೇವೆ. ಅಷ್ಟೆ ಅಲ್ಲ ಸುಶಾಂತ್‌ಗೆ ಸಂಬಂಧಿಸಿದಂತೆ ಅನುಮತಿ ಪಡೆಯದೇ ಸಿನಿಮಾ, ಧಾರಾವಾಹಿ ಅಥವಾ ಪುಸ್ತಕ ಬರೆದರೂ ಸೂಕ್ತ ಕ್ರಮಕ್ಕೆ ಮುಂದಾಗುತ್ತೇವೆ ಎಂದಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...