alex Certify ಪತ್ನಿ ತಲೆ ಕತ್ತರಿಸಿ ದೇವಿಗೆ ಅರ್ಪಿಸಿದ ಪತಿ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪತ್ನಿ ತಲೆ ಕತ್ತರಿಸಿ ದೇವಿಗೆ ಅರ್ಪಿಸಿದ ಪತಿ…!

News

ಮಧ್ಯಪ್ರದೇಶದ ಸಿಂಗ್ರೌಲಿ ಜಿಲ್ಲೆಯಲ್ಲಿ ಮೂಢ ನಂಬಿಕೆಗೆ ಮಹಿಳೆಯೊಬ್ಬಳು ಬಲಿಯಾಗಿದ್ದಾಳೆ. ಪತ್ನಿ ಕತ್ತು ಕತ್ತರಿಸಿ ಪತಿ ದೇವಿಗೆ ಅರ್ಪಿಸಿದ್ದಾನೆ. ಈ ಭೀಕರ ಘಟನೆಯ ನಂತರ ಪೊಲೀಸ್ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡು ವಿಚಾರಣೆ ಶುರು ಮಾಡಿದ್ದಾರೆ.

ಸಿಂಗ್ರೌಲಿ ಜಿಲ್ಲೆಯ ಬೈಧಾನ್ ಪೊಲೀಸ್ ಠಾಣೆ ಪ್ರದೇಶದ ಬಸೋದಾ ಗ್ರಾಮದ ನಿವಾಸಿ ಬ್ರಜೇಶ್ ಕೆವಾತ್, ಪತ್ನಿ ಬಿಟ್ಟಿ ಕೆವಾತ್‌ ಕತ್ತು ಕತ್ತರಿಸಿದ್ದಾನೆ. ತಂದೆ ಕೃತ್ಯಕ್ಕೆ ಮಗ ಸಾಕ್ಷಿಯಾಗಿದ್ದಾನೆ. ಘಟನೆ ನಂತ್ರ ಆರೋಪಿ ಪರಾರಿಯಾಗಿದ್ದಾನೆ. ಸುತ್ತಮುತ್ತಲು ಪೂಜೆ ಸಾಮಗ್ರಿಗಳಿವೆ. ತಲೆಯನ್ನು ಭೂಮಿಯಲ್ಲಿ ಹೂಳಲಾಗಿದೆ.

ಇದನ್ನು ನೋಡಿದ ಪೊಲೀಸರಿಗೆ ಇದು ಮೂಢನಂಬಿಕೆ ಎಂಬುದು ಗೊತ್ತಾಗಿದೆ. ಈ ಪ್ರದೇಶದಲ್ಲಿ ಬಲಿ, ಮೂಢನಂಬಿಕೆಗೆ ಬಗ್ಗೆ ಹೆಚ್ಚಿನ ನಂಬಿಕೆಯಿದೆ. ದೊಡ್ಡ ಬೇಡಿಕೆ ಮುಂದಿಟ್ಟಾಗ ಜನರು ಕುಲ ದೇವರಿಗೆ ನರಬಲಿ ನೀಡುತ್ತಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...