alex Certify ಧರ್ಮಸ್ಥಳದಲ್ಲಿ ಶಿವಾನಿ ತುಂಟಾಟ ಕಣ್ತುಂಬಿಕೊಂಡ ಭಕ್ತರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಧರ್ಮಸ್ಥಳದಲ್ಲಿ ಶಿವಾನಿ ತುಂಟಾಟ ಕಣ್ತುಂಬಿಕೊಂಡ ಭಕ್ತರು

ಶ್ರೀ ಕ್ಷೇತ್ರ ಧರ್ಮಸ್ಥಳದ ಅಮೃತವರ್ಷಿಣಿ ಸಭಾಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಲಕ್ಷ್ಮಿ ಆನೆಗೆ ಜನಿಸಿದ ಮುದ್ದುಮರಿಗೆ ಶಿವಾನಿ ಎಂದು ನಾಮಕರಣ ಮಾಡಲಾಗಿದೆ.

ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಅವರ ಮೊಮ್ಮಗಳು ಮಾನ್ಯ ‘ಶಿವಾನಿ’ ಹೆಸರಿನ ನಾಮಫಲಕ ಅನಾವರಣ ಮಾಡಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ವೀರೇಂದ್ರ ಹೆಗ್ಗಡೆಯವರು, ಶ್ರೀ ಮಂಜುನಾಥ ಸ್ವಾಮಿಯ ಸನ್ನಿಧಿಯಲ್ಲಿ ಉತ್ಸವ, ಮೆರವಣಿಗೆ ವೇಳೆ ಗಜಸೇವೆ ನಡೆಯಲಿದೆ. ನೂರಾರು ವರ್ಷಗಳಿಂದ ಆನೆಗಳು ಕ್ಷೇತ್ರದ ಉತ್ಸವದಲ್ಲಿ ಭಾಗಿಯಾಗುತ್ತಿವೆ. ಈ ಆನೆಗೆ ಶಿವಾನಿ ಎಂದು ನಾಮಕರಣ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಎರಡು ವರ್ಷದ ಹಿಂದೆ ಕ್ಷೇತ್ರದ ಆನೆ ಲಕ್ಷ್ಮಿಯನ್ನು ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ಕಳುಹಿಸಲಾಗಿತ್ತು. ಎರಡು ವರ್ಷ 2 ತಿಂಗಳ ಗಜ ಗರ್ಭದಿಂದ ಹೆಣ್ಣು ಆನೆಮರಿ ಜನ್ಮ ಪಡೆದಿದೆ. ಶಿವಾನಿ ಆನೆಮರಿಯ ತುಂಟಾಟ ನಾಮಕರಣ ಸಮಾರಂಭದಲ್ಲಿ ಗಮನಸೆಳೆದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...