alex Certify ಬಿಸಿಸಿಐ ವಿರುದ್ಧ ಕಿಡಿಕಾರಿದ ಅಖ್ತರ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಿಸಿಸಿಐ ವಿರುದ್ಧ ಕಿಡಿಕಾರಿದ ಅಖ್ತರ್

Akhtar Accuses BCCI power lead Asia Cup and World Cup cancellation

ಟಿ-20 ವಿಶ್ವಕಪ್ ರದ್ದಾಗ್ತಿದ್ದಂತೆ ಐಪಿಎಲ್ 13ರ ಬಗ್ಗೆ ಚರ್ಚೆ ಹೆಚ್ಚಾಗಿದೆ. ಸೆಪ್ಟೆಂಬರ್ ಕೊನೆಯ ವಾರದಿಂದ ನವೆಂಬರ್ ಮೊದಲ ವಾರದವರೆಗೆ ಐಪಿಎಲ್ ಆಯೋಜಿಸಲು ಬಿಸಿಸಿಐ ಚಿಂತಿಸುತ್ತಿದೆ.  ಏಷ್ಯಾಕಪ್ ರದ್ದಾಗಿದ್ದು, ಐಪಿಎಲ್ ಬಗ್ಗೆ ಚಿಂತಿಸುತ್ತಿರುವ ಬಿಸಿಸಿಐ ಬಗ್ಗೆ ಪಾಕಿಸ್ತಾನದ ಮಾಜಿ ವೇಗದ ಬೌಲರ್ ಶೋಯೆಬ್ ಅಖ್ತರ್ ಹರಿಹಾಯ್ದಿದ್ದಾರೆ.

ಟಿ-20 ವಿಶ್ವಕಪ್ ಹಾಗೂ ಏಷ್ಯಾಕಪ್ ಎರಡೂ ಪಂದ್ಯಾವಳಿಗಳನ್ನು ರದ್ದುಗೊಳಿಸಲು ಬಿಸಿಸಿಐ ತನ್ನ ಶಕ್ತಿಯನ್ನು ಬಳಸಿಕೊಂಡಿದೆ ಎಂದು ಅಖ್ತರ್ ಆರೋಪಿಸಿದ್ದಾರೆ. ಏಷ್ಯಾ ಕಪ್ ನಡೆದಿದ್ದರೆ ಭಾರತ ಮತ್ತು ಪಾಕಿಸ್ತಾನದ ನಡುವಿನ ಆಟವನ್ನು ನೋಡುವ ಅವಕಾಶ ಸಿಗ್ತಿತ್ತು. ಪಂದ್ಯಾವಳಿ ರದ್ದಾಗಲು ಹಲವು ಕಾರಣಗಳಿರಬಹುದು. ಆದರೆ ಇದೆಲ್ಲವನ್ನೂ ನಾನು ಹೇಳಲು ಬಯಸುವುದಿಲ್ಲವೆಂದು ಅಖ್ತರ್ ಹೇಳಿದ್ದಾರೆ.

ಐಪಿಎಲ್ ಗೆ ಯಾವುದೇ ನಷ್ಟವಾಗಬಾರದು. ಬೇರೆ ಏನಾದ್ರೂ ಅವ್ರಿಗೆ ಚಿಂತೆಯಿಲ್ಲವೆಂದು ಅಖ್ತರ್ ಆರೋಪ ಮಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...