ಮುಂಬೈ: ಕರೋನಾ ವೈರಸ್ ಸೋಂಕಿನಿಂದ ಗುಣಮುಖರಾಗಿ ಮನೆಗೆ ಮರಳಿದ ಮುಂಬೈ ಪೊಲೀಸ್ ಅಧಿಕಾರಿಗೆ ಅವರ ನೆರೆಹೊರೆಯ ಜನ ಆತ್ಮಿಯ ಸ್ವಾಗತ ನೀಡಿದ್ದಾರೆ.
ಮುಂಬೈ ಪೊಲೀಸ್ ಎಎಸ್ಐ ಕಿರಣ್ ಪವಾರ್ ಕೊರೋನಾ ಸೋಂಕಿನಿಂದ ಗುಣಮುಖರಾಗಿ ಶನಿವಾರ ಮನೆಗೆ ಮರಳಿದರು. ಈ ಸಂದರ್ಭದಲ್ಲಿ ಅಕ್ಕಪಕ್ಕದವರು ಸಾಲಾಗಿ ನಿಂತು ಅವರ ಮೇಲೆ ಹೂವಿನ ಮಳೆ ಸುರಿಸಿ, ಚಪ್ಪಾಳೆ ತಟ್ಟಿದರು. ಗಣಪತಿ ಬಪ್ಪಾ ಮೋರಯಾ, ಭಾರತ್ ಮಾತಾಕಿ ಜೈ ಎಂಬ ಘೋಷಣೆ ಕೂಗಿದರು. ಈ ಸಂದರ್ಭದ ವಿಡಿಯೋವನ್ನು ಎಎನ್ಐ ಟ್ವೀಟ್ ಮಾಡಿದ್ದು, ಸಾಕಷ್ಟು ವೈರಲ್ ಆಗಿದೆ.
ವಿಡಿಯೋವನ್ನು 24.6 ಸಾವಿರ ಜನ ವೀಕ್ಷಿಸಿದ್ದು, ಮುಂಬೈ ಪೊಲೀಸ್ ಕಾರ್ಯದ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ದೀರ್ಘಾಯುಷಿಯಾಗಿ ಎಂದು ಪವಾರ್ ಅವರಿಗೆ ಹಾರೈಸಿದ್ದಾರೆ.