ರಾಜ್ಯಕ್ಕೆ ಕಂಟಕಪ್ರಾಯವಾಗಿ ಪರಿಣಮಿಸಿರುವ ಕೊರೊನಾ ಮಹಾಮಾರಿ ಈಗಾಗಲೇ 42 ಮಂದಿಯನ್ನು ಬಲಿ ಪಡೆದಿದೆ. ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲಿದ್ದು, ಶನಿವಾರ ಒಂದೇ ದಿನ 216 ಪ್ರಕರಣಗಳು ಪತ್ತೆಯಾಗಿವೆ.
ಇದರ ಮಧ್ಯೆ ಅಧ್ಯಯನವೊಂದು ಆಘಾತಕಾರಿ ಅಂಶವನ್ನು ಬಹಿರಂಗಪಡಿಸಿದ್ದು, ಕೊರೊನಾ ಸೋಂಕಿತರಲ್ಲಿ ಶೇ.45 ಮಂದಿ ಯುವ ಜನರಿದ್ದಾರೆ ಎಂದು ತಿಳಿಸಿದೆ. ಯುವಜನತೆಗೆ ಸೋಂಕು ಅಷ್ಟು ಸುಲಭವಾಗಿ ತಗಲುವುದಿಲ್ಲ ಎಂಬ ಮಾತು ಇದರಿಂದ ಸುಳ್ಳಾಗಿದೆ.
ಲಾಕ್ಡೌನ್ ಸಡಿಲಿಕೆ ಬಳಿಕ ಯುವಜನರು ಹೆಚ್ಚಾಗಿ ಹೊರಗಡೆ ತಿರುಗುತ್ತಿದ್ದಾರೆ. ಇವರುಗಳಿಗೆ ಸೋಂಕು ತಗುಲಿದರೂ ಬೇಗನೆ ಗುಣ ಹೊಂದುತ್ತಾರೆ. ಆದರೆ ಇವರಿಂದ ಮನೆಯ ಹಿರಿಯರಿಗೆ ಸೋಂಕು ತಗುಲಿದರೆ ಕಷ್ಟ ಎಂದು ಹೆಚ್.ಸಿ.ಜಿ. ಆಸ್ಪತ್ರೆಯ ಡಾ. ವಿಶಾಲ್ ರಾವ್ ತಿಳಿಸಿದ್ದಾರೆ.