alex Certify BIG NEWS : ರಾಜ್ಯ ಸರ್ಕಾರ ಮದ್ಯಪ್ರಿಯರಿಗೆ ವಾರಕ್ಕೆ 2 ಉಚಿತ ಎಣ್ಣೆ ಬಾಟಲ್ ನೀಡಲಿ : ವಿಧಾನಸಭೆಯಲ್ಲಿ ಬೇಡಿಕೆಯಿಟ್ಟ ಶಾಸಕ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS : ರಾಜ್ಯ ಸರ್ಕಾರ ಮದ್ಯಪ್ರಿಯರಿಗೆ ವಾರಕ್ಕೆ 2 ಉಚಿತ ಎಣ್ಣೆ ಬಾಟಲ್ ನೀಡಲಿ : ವಿಧಾನಸಭೆಯಲ್ಲಿ ಬೇಡಿಕೆಯಿಟ್ಟ ಶಾಸಕ..!

ಬೆಂಗಳೂರು: ಕರ್ನಾಟಕ ವಿಧಾನಸಭೆಯಲ್ಲಿ ಮಂಗಳವಾರ ಅಬಕಾರಿ ಆದಾಯದ ಗುರಿಗಳ ಬಗ್ಗೆ ಗಂಭೀರ ಚರ್ಚೆ ನಡೆಯಿತು.

ಮದ್ಯಪ್ರಿಯರಿಗೆ ಪ್ರತಿ ವಾರ ಎರಡು ಬಾಟಲಿ ಮದ್ಯವನ್ನು ಉಚಿತವಾಗಿ ನೀಡಬೇಕು ಎಂದು ಹಿರಿಯ ಶಾಸಕರೊಬ್ಬರು ಹೇಳಿದರೆ, ಇನ್ನೊಬ್ಬರು ಸಂಪೂರ್ಣ ನಿಷೇಧಕ್ಕೆ ಕರೆ ನೀಡಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ 2025-26ನೇ ಸಾಲಿನ ಬಜೆಟ್ ನಲ್ಲಿ ಅಬಕಾರಿ ಆದಾಯದ ಗುರಿಯನ್ನು 40,000 ಕೋಟಿ ರೂ.ಗೆ ಹೆಚ್ಚಿಸಿದ್ದು, ಶೀಘ್ರವೇ ಮದ್ಯದ ದರ ಕೂಡ ಹೆಚ್ಚಳವಾಗುವ ಸಾಧ್ಯತೆಯಿದೆ.ಈ ವಿಚಾರ ವಿಧಾನಸಭೆಯಲ್ಲಿ ಭಾರಿ ಚರ್ಚೆಗೆ ಕಾರಣವಾಯಿತು.

ಕೇವಲ ಒಂದು ವರ್ಷದಲ್ಲಿ ಸರ್ಕಾರವು ಮೂರು ಬಾರಿ ಅಬಕಾರಿ ತೆರಿಗೆಯನ್ನು ಹೆಚ್ಚಿಸಿದೆ. ಇದು ಬಡವರ ಮೇಲೆ ಪರಿಣಾಮ ಬೀರುತ್ತಿದೆ. ಅಬಕಾರಿ ಗುರಿ 40,000 ಕೋಟಿ ರೂ. ಮತ್ತೆ ತೆರಿಗೆ ಹೆಚ್ಚಿಸದೆ ಇದನ್ನು ಸಾಧಿಸುವುದು ಹೇಗೆ?’ ಎಂದು ತುರುವೇಕೆರೆಯನ್ನು ಪ್ರತಿನಿಧಿಸುವ ಜೆಡಿಎಸ್ ಹಿರಿಯ ಶಾಸಕ ಎಂ.ಟಿ.ಕೃಷ್ಣಪ್ಪ ಹೇಳಿದರು.

“ಜನರು, ವಿಶೇಷವಾಗಿ ಕಾರ್ಮಿಕ ವರ್ಗವನ್ನು ಕುಡಿಯುವುದನ್ನು ನಾವು ತಡೆಯಲು ಸಾಧ್ಯವಿಲ್ಲ” ಎಂದು ಕೃಷ್ಣಪ್ಪ ಹೇಳಿದರು. ನೀವು ಮಹಿಳೆಯರಿಗೆ ತಿಂಗಳಿಗೆ 2,000 ರೂ., ಉಚಿತ ವಿದ್ಯುತ್ ಮತ್ತು ಉಚಿತ ಬಸ್ ಪ್ರಯಾಣವನ್ನು ನೀಡುತ್ತೀರಿ.. ಆದ್ದರಿಂದ, ಕುಡಿಯುವವರಿಗೆ ಪುರುಷಕರಿಗೆ ಎರಡು ಬಾಟಲಿಗಳನ್ನು ನೀಡಿ. ಎಂದರು.
ಪುರುಷರಿಗೆ ಏನಾದರೂ ಕೊಡಿ… ವಾರಕ್ಕೆ ಎರಡು ಬಾಟಲಿಗಳನ್ನು ನೀಡಿ…ಸರ್ಕಾರ ಇದನ್ನು ಸೊಸೈಟಿಗಳ ಮೂಲಕ ಒದಗಿಸಬಹುದು’ ಎಂದು ಕೃಷ್ಣಪ್ಪ ಸಲಹೆ ನೀಡಿದರು. ಸರ್ಕಾರದ ಪರವಾಗಿ ಉತ್ತರಿಸಿದ ಇಂಧನ ಸಚಿವ ಕೆ.ಜೆ.ಜಾರ್ಜ್, “ಚುನಾವಣೆಯಲ್ಲಿ ಗೆಲ್ಲಿ… ಸರ್ಕಾರ ರಚಿಸಿ ಮತ್ತು ಇದನ್ನು ನೀವು ಮಾಡಿ. ನಾವು ಜನರನ್ನು ಕಡಿಮೆ ಕುಡಿಯುವಂತೆ ಮಾಡಲು ಪ್ರಯತ್ನಿಸುತ್ತಿದ್ದೇವೆ ಎಂದು ಟಾಂಗ್ ನೀಡಿದರು.

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...