alex Certify BIG NEWS : ಮಾ.31 ರೊಳಗೆ ಖಜಾನೆಗೆ ವರ್ಷಾಂತ್ಯದ ಬಿಲ್ಲುಗಳ ಸಲ್ಲಿಕೆ : ರಾಜ್ಯ ಸರ್ಕಾರದಿಂದ ಮಹತ್ವದ ಆದೇಶ.! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS : ಮಾ.31 ರೊಳಗೆ ಖಜಾನೆಗೆ ವರ್ಷಾಂತ್ಯದ ಬಿಲ್ಲುಗಳ ಸಲ್ಲಿಕೆ : ರಾಜ್ಯ ಸರ್ಕಾರದಿಂದ ಮಹತ್ವದ ಆದೇಶ.!

ಬೆಂಗಳೂರು : ಮಾ.31 ರೊಳಗೆ ಬಿಲ್ಲುಗಳನ್ನು ಖಜಾನೆಗೆ ಸಲ್ಲಿಸುವ ಕುರಿತು ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ.

ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ. ಉಲ್ಲೇಖಿತ ಅಂತರಿಕ ಸುತ್ತೋಲೆಯಲ್ಲಿ (ಲಗತ್ತಿಸಿದೆ) ದಿನಾಂಕ:15.03.2025 ರೊಳಗಾಗಿ ಹೊರಡಿಸುವ ಹೆಚ್ಚುವರಿ / ಪುನರ್ವಿನಿಯೋಗ ಆದೇಶಗಳನ್ನು ಒಳಗೊಂಡಂತೆ ಯಾವುದೇ ಹಣ ಬಿಡುಗಡೆಗೆ ಅನುಮತಿಸುವ ಸಂಧರ್ಭಗಳಲ್ಲಿ ತತ್ಸಂಬಂಧ ಬಿಲ್ಲುಗಳನ್ನು, ಆರ್ಥಿಕ ಇಲಾಖೆಯಿಂದ ಹೊರಡಿಸಲಾಗುವ ಹಿಂಬರಹದ ದಿನಾಂಕದಿಂದ 10 ದಿನಗಳೊಳಗಾಗಿ ಖಜಾನೆಗೆ ಸಲ್ಲಿಸುವಂತೆ ಹಾಗೂ ದಿನಾಂಕ:15.03.2025 ರ ನಂತರ ಹೊರಡಿಸಲಾಗುವ ಇಂತಹ ಹಿಂಬರಹಗಳಲ್ಲಿ, ಹಿಂಬರಹದ ದಿನಾಂಕದಿಂದ 07 ದಿನಗಳೊಳಗಾಗಿ ಖಜಾನೆಗೆ ಬಿಲ್ಲುಗಳನ್ನು ಸಲ್ಲಿಸಲು ಸೂಚಿಸುವಂತೆ ತಿಳಿಸಲಾಗಿರುತ್ತದೆ.

ಆದರೆ, ಈ ಆಂತರಿಕ ಸುತ್ತೋಲೆಯನ್ನು ಹೊರಡಿಸುವುದಕ್ಕಿಂತ ಮುಂಚೆ ಹೊರಡಿಸಲಾಗಿರುವ ಹೆಚ್ಚುವರಿ / ಪುನರ್ವಿನಿಯೋಗ ಆದೇಶಗಳಿಗೆ ಮತ್ತು ಅನುದಾನ ಸೆಳೆಯಲು ಸಹಮತಿಸಿದ ಹಿಂಬರಹಗಳಿಗೆ ಸಂಬಂಧಿಸಿದಂತಹ ಬಿಲ್ಲುಗಳನ್ನು ಖಜಾನೆಯಲ್ಲಿ ಸ್ವೀಕರಿಸುವಂತೆ ತಿಳಿಸಲು ನಾನು ನಿರ್ದೇಶಿತಳಾಗಿದ್ದೇನೆ ಎಂದು ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು ಸುತ್ತೋಲೆ ಹೊರಡಿಸಿದ್ದಾರೆ.

 

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...