ಬೆಂಗಳೂರು : ನಟಿ ರನ್ಯಾರಾವ್ ಚಿನ್ನಕಳ್ಳಸಾಗಾಣೆ ಪ್ರಕರಣದಲ್ಲಿ ಪ್ರಭಾವಿ ಸ್ವಾಮೀಜಿಯ ಕೈವಾಡ ಇದೆ ಎಂದು ತನಿಖೆಯಲ್ಲಿ ಸ್ಪೋಟಕ ಮಾಹಿತಿ ಬಯಲಾಗಿದೆ.
ಚಿನ್ನಕಳ್ಳಸಾಗಾಣೆ ಪ್ರಕರಣದ ತನಿಖೆಯನ್ನು ಡಿ ಆರ್ ಐ ಮತ್ತು ಸಿಬಿಐ ಅಧಿಕಾರಿಗಳು ನಡೆಸುತ್ತಿದ್ದು, ದಿನದಿಂದ ದಿನಕ್ಕೆ ಸ್ಪೋಟಕ ಮಾಹಿತಿ ಬಯಲಾಗುತ್ತಿದೆ. ನಟಿ ರನ್ಯಾರಾವ್ ಚಿನ್ನಕಳ್ಳಸಾಗಾಣೆ ಪ್ರಕರಣದಲ್ಲಿ ಪ್ರಭಾವಿ ಸ್ವಾಮೀಜಿಯ ಕೈವಾಡ ಇದೆ ಎನ್ನಲಾಗಿದೆ. ಈ ಸ್ವಾಮೀಜಿಗೆ ರಾಜಕೀಯ ನಾಯಕರ ನಿಖರ ಸಂಪರ್ಕವಿದೆ, ದುಬೈನಲ್ಲಿ ಆಫೀಸ್ ಇಟ್ಟುಕೊಂಡು ಸ್ವಾಮೀಜಿ ಡೀಲ್ ಮಾಡುತ್ತಿದ್ದರು ಎನ್ನಲಾಗಿದೆ. ಆಫೀಸ್ ನಲ್ಲಿ ಸ್ವಾಮೀಜಿ ಕ್ರಿಪ್ಟೋ ಕರೆನ್ಸಿ, ಹಣ ವಿನಿಮಯ ಮಾಡುತ್ತಿದ್ದರು.
ಅಲ್ಲದೇ ಬೆಂಗಳೂರಿನಲ್ಲಿ ಸ್ವಾಮೀಜಿ ಮನೆ ಮೇಲೆ ಡಿ ಆರ್ ಐ ಅಧಿಕಾರಿಗಳು ದಾಳಿ ನಡೆಸಿದಾಗ ಅಪಾರ ಪ್ರಮಾಣದ ಚಿನ್ನ ಪತ್ತೆಯಾಗಿತ್ತು.