alex Certify HDK ಮೂಡಾದಲ್ಲಿ ಭಾರಿ ಭೂಕಬಳಿಕೆ ಮಾಡಿದ್ದಾರೆ ಎಂದು ಬಿಜೆಪಿಯೇ ಕರಪತ್ರ ಹಂಚಿತ್ತು : ಸಚಿವ ಪ್ರಿಯಾಂಕ್ ಖರ್ಗೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

HDK ಮೂಡಾದಲ್ಲಿ ಭಾರಿ ಭೂಕಬಳಿಕೆ ಮಾಡಿದ್ದಾರೆ ಎಂದು ಬಿಜೆಪಿಯೇ ಕರಪತ್ರ ಹಂಚಿತ್ತು : ಸಚಿವ ಪ್ರಿಯಾಂಕ್ ಖರ್ಗೆ

ಬೆಂಗಳೂರು : ಹೆಚ್.ಡಿ ಕುಮಾರಸ್ವಾಮಿ ಮೂಡಾದಲ್ಲಿ ಭಾರಿ ಭೂಕಬಳಿಕೆ ಮಾಡಿದ್ದಾರೆ ಎಂದು ಬಿಜೆಪಿಯೇ ಕರಪತ್ರ ಹಂಚಿತ್ತು ಎಂದು ಸಚಿವ ಪ್ರಿಯಾಂಕ್ ಖರ್ಗೆ ಟ್ವೀಟ್ ಮಾಡಿದ್ದಾರೆ.

ಜೆಡಿಎಸ್ & ಬಿಜೆಪಿ, ಹಿಂದೆ ಕುಸ್ತಿ ಮಾಡಿದವರೇ ಇಂದು ದೋಸ್ತಿ ಮಾಡುತ್ತಿರುವವರು, ಆದರೆ ಕುಸ್ತಿ ಕಾಲದ ಸಾಕ್ಷಿಗಳು ಇಂದಿಗೂ ಹಾಗೆಯೇ ಇವೆ! ಈ ದೋಸ್ತಿಗಳು ಕುಸ್ತಿ ಆಡುತ್ತಿದ್ದ ಸಂದರ್ಭದಲ್ಲಿ ಅವರವರ ಹಗರಣಗಳು ಅವರವರೇ ಅನಾವರಣಗೊಳಿಸಿದ್ದರು, ಕುಮಾರಸ್ವಾಮಿ ಅವರು ಮೂಡಾದಲ್ಲಿ ಭಾರಿ ಭೂಕಬಳಿಕೆ ಮಾಡಿದ್ದಾರೆ ಎಂದು ಬಿಜೆಪಿ ಪಕ್ಷವೇ ವಿವರಗಳ ಸಮೇತ ಕರಪತ್ರ ಹಂಚಿತ್ತು. ಆದರೆ ಈಗ ಬಿಜೆಪಿ ನಾಯಕರಿಗೆ ಈ ಸಂಗತಿ ಮರೆತು ಹೋಯ್ತೆ?

ತಾವೇ ಭ್ರಷ್ಟಾಚಾರದ ಆರೋಪ ಮಾಡಿ ಅದೇ JD(S)ಯಾವರೊಂದಿಗೆ ಮೈತ್ರಿ ಮಾಡಿಕೊಂಡಿದ್ದು ಅನೈತಿಕ ರಾಜಕಾರಣವಲ್ಲವೇ? ಬಿಜೆಪಿ ನಾಯಕರು JD(S) ಯವರ ವಿರುದ್ಧ ಪಾದಯಾತ್ರೆ ಮಾಡುವುದು ಯಾವಾಗ? ಈ ಭೂಕಬಳಿಕೆಯನ್ನು ಪ್ರಶ್ನೆ ಮಾಡುವುದು ಯಾವಾಗ? ಬಿಜೆಪಿಯದ್ದು ಭ್ರಷ್ಟಾಚಾರದ ವಿರುದ್ಧ ಶೂನ್ಯ ಸಹಿಷ್ಣತೆ ಎಂದು ನಿರೂಪಿಸುವುದು ಯಾವಾಗ? ಎಂದು ಸಚಿವ ಪ್ರಿಯಾಂಕ್ ಖರ್ಗೆ ಟ್ವೀಟ್ ಮಾಡಿದ್ದಾರೆ.

 

 

 

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...