alex Certify ಪೊಲೀಸ್ ತನಿಖೆಯಲ್ಲಿ ಬಯಲಾಯ್ತು ಯುವಕನ ಕೊಲೆ ರಹಸ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪೊಲೀಸ್ ತನಿಖೆಯಲ್ಲಿ ಬಯಲಾಯ್ತು ಯುವಕನ ಕೊಲೆ ರಹಸ್ಯ

ಕಲ್ಬುರ್ಗಿಯಲ್ಲಿ ನಡೆದ ಯುವಕನ ಕೊಲೆ ರಹಸ್ಯ ಪೊಲೀಸರ ತನಿಖೆಯಲ್ಲಿ ಬಯಲಾಗಿದೆ. ಪೌರಕಾರ್ಮಿಕನಾಗಿದ್ದ ಪ್ರವೀಣ್ ಕುಮಾರ್ ಕೊಲೆಯಾದ ಯುವಕ. ಈತ ಪ್ರೀತಿಸುವಂತೆ ಯುವತಿಗೆ ಕೇಳಿದ್ದಕ್ಕೆ ಆಕೆಯ ಸಹೋದರ ಮತ್ತು ಸ್ನೇಹಿತರು ಸೇರಿಕೊಂಡು ಪ್ರವೀಣ್ ಕುಮಾರ್ ನನ್ನು ಕೊಲೆ ಮಾಡಿದ್ದಾರೆ ಎನ್ನುವುದು ಪೊಲೀಸರ ತನಿಖೆಯಲ್ಲಿ ಗೊತ್ತಾಗಿದೆ.

ಅ. 4 ರಂದು ಕಲಬುರ್ಗಿ ಹೈಕೋರ್ಟ್ ಹಿಂಭಾಗದ ಶರಣಶಿರಸಗಿ ಸಮೀಪ ಆಶ್ರಯ ಕಾಲೋನಿ ನಿವಾಸಿ ಪ್ರವೀಣ್ ಕುಮಾರ್(23) ಮೃತದೇಹ ಪತ್ತೆಯಾಗಿತ್ತು. ಅಶೋಕನಗರ ಠಾಣೆ ಪೋಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಸಾಗರ್ ಆತನ ಸ್ನೇಹಿತರಾದ ಆಕಾಶ್, ರಾಜಶೇಖರ್, ಸಂತೋಷ್ ಅವರನ್ನು ಬಂಧಿಸಿದ್ದಾರೆ.

ಸಾಗರ್ ಸಹೋದರಿಗೆ ಪ್ರೀತಿಸುವಂತೆ ಪ್ರವೀಣ್ ಕುಮಾರ್ ಕೇಳಿದ್ದ. ಇದೇ ಕಾರಣಕ್ಕೆ ಸಾಗರ್ ತನ್ನ ಸ್ನೇಹಿತರೊಂದಿಗೆ ಸೇರಿ ಪ್ರವೀಣ್ ಕುಮಾರ್ ನನ್ನು ಕರೆದೊಯ್ದು ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆ. ಮೃತದೇಹವನ್ನು ಶರಣಶಿರಸಗಿ ಸಮೀಪ ಎಸೆದು ಪರಾರಿಯಾಗಿದ್ದರು. ಅಶೋಕನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಕೈಗೊಂಡ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...