JEE ಪರೀಕ್ಷೆಯಲ್ಲಿ ಅನುತ್ತೀರ್ಣ: ಹೆತ್ತವರಿಗೆ ಕ್ಷಮಾಪಣಾ ಪತ್ರ ಬರೆದು ವಿದ್ಯಾರ್ಥಿನಿ ಆತ್ಮಹತ್ಯೆ | Shocking

ಉತ್ತರ ಪ್ರದೇಶದ ಗೋರಖ್‌ಪುರದಲ್ಲಿ 18 ವರ್ಷದ ಅದಿತಿ ಮಿಶ್ರಾ ಎಂಬ ವಿದ್ಯಾರ್ಥಿನಿ ಬುಧವಾರ (ಫೆಬ್ರವರಿ 12) ಆತ್ಮಹತ್ಯೆ ಮಾಡಿಕೊಂಡಿದ್ದು, ತನ್ನ ಹೆತ್ತವರಿಗೆ “ಕ್ಷಮಿಸಿ” ಎಂದು ಪತ್ರ ಬರೆದಿದ್ದಾರೆ. ಘಟನೆಗೆ ಒಂದು ದಿನ ಮೊದಲು, JEE ಫಲಿತಾಂಶಗಳು ಪ್ರಕಟವಾಗಿದ್ದು, ಅದಿತಿ ಅನುತ್ತೀರ್ಣರಾಗಿದ್ದರು. ಫಲಿತಾಂಶದಿಂದ ಕುಗ್ಗಿಹೋದ ಅದಿತಿ ನೇಣು ಹಾಕಿಕೊಂಡು ಸಾವನ್ನಪ್ಪಿದ್ದಾರೆ. ಅದಿತಿಯ ಕೊಠಡಿಯಲ್ಲಿ ಕಂಡುಬಂದ ಆತ್ಮಹತ್ಯಾ ಪತ್ರದಲ್ಲಿ “ಅಮ್ಮ, ಅಪ್ಪ ಕ್ಷಮಿಸಿ, ನನ್ನಿಂದ ಆಗಲಿಲ್ಲ…… ” ಎಂದು ಬರೆಯಲಾಗಿತ್ತು.

ಗೋರಖ್‌ಪುರದ ಕಾಂಟ್ ಪೊಲೀಸ್ ಸ್ಟೇಷನ್ ಪ್ರದೇಶದ ಬೆಟಿಯಾಹಟದಲ್ಲಿರುವ ಮೊಮೆಂಟಮ್ ಕೋಚಿಂಗ್ ಸೆಂಟರ್‌ನ ವಿದ್ಯಾರ್ಥಿನಿಯಾಗಿದ್ದ ಅದಿತಿ ಎರಡು ವರ್ಷಗಳಿಂದ JEE ಗೆ ತಯಾರಿ ನಡೆಸುತ್ತಿದ್ದರು. ಅವರು ಸತ್ಯದೀಪ್ ಗರ್ಲ್ಸ್ ಹಾಸ್ಟೆಲ್‌ನಲ್ಲಿ ಮತ್ತೊಬ್ಬ ಹುಡುಗಿಯೊಂದಿಗೆ ಕೊಠಡಿಯನ್ನು ಹಂಚಿಕೊಂಡಿದ್ದರು.

JEE ಪರೀಕ್ಷೆಯಲ್ಲಿ ಅನುತ್ತೀರ್ಣರಾದ ನಂತರ, ಅವರು ಬುಧವಾರ ಬೆಳಿಗ್ಗೆ ತಮ್ಮ ಹೆತ್ತವರೊಂದಿಗೆ ಮಾತನಾಡಿದ್ದು, ಈ ಸಮಯದಲ್ಲಿ, ಅವರು ತಂದೆಗೆ ತಮ್ಮ ಮೊಬೈಲ್ ಅನ್ನು ರೀಚಾರ್ಜ್ ಮಾಡಲು ಸಹ ಕೇಳಿದ್ದರು. ಅದೇ ಸಮಯದಲ್ಲಿ, ಅದಿತಿಯ ರೂಮ್‌ಮೇಟ್ ಹೊರಗೆ ಹೋಗಿದ್ದರು.

ಅದಿತಿಯ ರೂಮ್‌ಮೇಟ್ ಹಿಂತಿರುಗಿ ಬಾಗಿಲು ತಟ್ಟಿದಾಗ, ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಹುಡುಗಿ ಒಳಗೆ ಇಣುಕಿ ನೋಡಿದಾಗ ಅದಿತಿ ಶಾಲಿನಿಂದ ನೇಣು ಬಿಗಿದುಕೊಂಡು ನೇತಾಡುತ್ತಿರುವುದು ಕಂಡುಬಂದಿದೆ. ರೂಮ್‌ಮೇಟ್ ಹಾಸ್ಟೆಲ್ ವಾರ್ಡನ್‌ಗೆ ತಿಳಿಸಿದ ನಂತರ ಪೊಲೀಸರಿಗೆ ಮಾಹಿತಿ ನೀಡಲಾಗಿದೆ.

ಪೊಲೀಸರು ತನಿಖೆ ನಡೆಸಿದಾಗ, ಅದಿತಿಯ ಕೊಠಡಿಯಲ್ಲಿ ಆತ್ಮಹತ್ಯಾ ಪತ್ರ ದೊರೆತಿದೆ: “ಅಮ್ಮ, ಅಪ್ಪ ಕ್ಷಮಿಸಿ, ನನ್ನಿಂದ ಆಗಲಿಲ್ಲ……. ಇದು ನಮ್ಮ ಸಂಬಂಧದ ಅಂತ್ಯವಾಗಿತ್ತು …… ನೀವು ಅಳಬೇಡಿ …… ನೀವು ನನಗೆ ತುಂಬಾ ಪ್ರೀತಿ ಕೊಟ್ಟಿದ್ದೀರಿ. ನಾನು ನಿಮ್ಮ ಕನಸುಗಳನ್ನು ಈಡೇರಿಸಲು ಸಾಧ್ಯವಾಗಲಿಲ್ಲ….. ನೀವು ದಯವಿಟ್ಟು ಚೋಟಿಯನ್ನು ನೋಡಿಕೊಳ್ಳಿ … ಅವಳು ಖಂಡಿತ ನಿಮ್ಮ ಕನಸುಗಳನ್ನು ಈಡೇರಿಸುತ್ತಾಳೆ. ನಿಮ್ಮ ಪ್ರೀತಿಯ ಮಗಳು- ಅದಿತಿ.” ಎಂದು ಬರೆಯಲಾಗಿತ್ತು.

ಸಂತ ಕಬೀರ್ ನಗರ ಜಿಲ್ಲೆಯ ಮಿಶ್ರೌಲಿಯಾ ಗ್ರಾಮದ ನಿವಾಸಿಗಳಾದ ಅದಿತಿಯ ಹೆತ್ತವರಿಗೆ ಈ ದುರಂತ ಸುದ್ದಿ ತಿಳಿಸಿ ವಿದ್ಯಾರ್ಥಿನಿಯ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಮರಣೋತ್ತರ ಪರೀಕ್ಷೆಯ ನಂತರವೇ ಸಾವಿನ ನಿಜವಾದ ಕಾರಣ ತಿಳಿಯಲಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ (ನಗರ) ಅಭಿನವ್ ತ್ಯಾಗಿ ತಿಳಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read